Advertisement

ಆಯುಷ್‌ ವೈದ್ಯ ಪದ್ಧತಿ ಪತ್ರೊಡೆಗೆ ಸ್ಥಾನ

12:10 AM Jul 02, 2021 | Team Udayavani |

ಹೊಸದಿಲ್ಲಿ: ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ, ಕೆಸುವಿನ ಎಲೆಯಲ್ಲಿ ತಯಾರಿಸುವ “ಪತ್ರೊಡೆ’ ಖಾದ್ಯವು ಈಗ ಕೇಂದ್ರ ಆಯುಷ್‌ ಸಚಿವಾಲಯದ ಆಯುಷ್‌ ವೈದ್ಯ ಪದ್ಧತಿಯ “ಸಾಂಪ್ರದಾಯಿಕ  ಆಹಾರ’ ಎಂಬ ಹೆಗ್ಗಳಿಕೆ ಪಡೆದಿದೆ.

Advertisement

ಸಚಿವಾಲಯವು ಇತ್ತೀಚೆಗೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಇ-ಪುಸ್ತಿಕೆಯಲ್ಲಿ 26 ಸಾಂಪ್ರದಾಯಿಕ ಖಾದ್ಯಗಳನ್ನು ಆಯ್ಕೆ ಮಾಡಿದ್ದು, ಆ ಪೈಕಿ ಪತ್ರೊಡೆಯೂ ಸೇರಿದೆ. ಪುಸ್ತಿಕೆಯಲ್ಲಿ ಪ್ರತಿಯೊಂದು ಖಾದ್ಯಕ್ಕೆ ಬೇಕಾಗುವ ಸಾಮಗ್ರಿ, ತಯಾರಿ ವಿಧಾನ, ಆರೋಗ್ಯಕ್ಕೆ ಆಗುವ ಲಾಭಗಳ ಕುರಿತು ಚಿತ್ರಸಹಿತ ವಿವರ ನೀಡಲಾಗಿದೆ.

ಪತ್ರೊಡೆಯಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದಲ್ಲದೇ, ಕೆಸುವಿನ ಎಲೆಯಲ್ಲಿ ಭರಪೂರ ವಿಟಮಿನ್‌ ಸಿ ಮತ್ತು ಬೀಟಾ ಕೆರೋಟೀನ್‌ ಇದೆ ಎಂದೂ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next