Advertisement

Road Mishap ಪೇತ್ರಿ: ಸ್ಕೂಟಿ ಸವಾರ ಸಾವು

10:21 PM Feb 02, 2024 | Team Udayavani |

ಬ್ರಹ್ಮಾವರ: ಪೇತ್ರಿ ಸರ್ಕಲ್‌ ಬಳಿ ಗುರುವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿ ಸವಾರ ಹಲುವಳ್ಳಿ ಉಪಾಧ್ಯಾಯರ ಬೆಟ್ಟಿನ ಮಂಜುನಾಥ (25) ಮೃತಪಟ್ಟಿದ್ದಾರೆ.

Advertisement

ಅವರು ಸಹ ಸವಾರ ಗಣೇಶ ಅವರೊಂದಿಗೆ ಮಡಿ ರಸ್ತೆ ಕಡೆಯಿಂದ ಆಗಮಿಸಿ ಮುಖ್ಯರಸ್ತೆ ದಾಟಲು ನಿಂತಿರುವಾಗ ಹೆಬ್ರಿ ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡ ಈರ್ವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.

ಮಂಜುನಾಥ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next