Advertisement
ಐವತ್ತು ವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದ ವ್ಯಕ್ತಿ ಈರಣ್ಣ (72) ತಿಂಗಳ ಹಿಂದೆ ಗ್ರಾದವರ ಕೈಗೆ ಸಿಕ್ಕಿದ್ದಾರೆ.
Related Articles
Advertisement
ಇಷ್ಟು ವರ್ಷಗಳ ಕಾಲ ಆಂಧ್ರಪ್ರದೇಶದ ಅನಂತಪುರ ತಾಲೂಕಿನ ಗುಮ್ಮಗಟ್ಟೆಯಲ್ಲಿ ವಾಸವಿದ್ದ ಸಣ್ಣ ಈರಣ್ಣ, ಕುರಿ ಗೊಬ್ಬರಕ್ಕಾಗಿ ಆಂಧ್ರ ಪ್ರದೇಶಕ್ಕೆ ಹೋಗಿದ್ದಾಗ ಸಂಬಂಧಿಕರಿಗೆ ಸಿಕ್ಕಿದ್ದಾರೆ. ಗುಮ್ಮಗಟ್ಟೆಯಲ್ಲಿ ಜೋಗಿ ಸಮುದಾಯದ ಜತೆ ಈರಣ್ಣ ಇದ್ದರು. ಅಲ್ಲಿಯೇ ಜೋಗಿ ಸಮುದಾಯದ ಅಕ್ಕ-ತಂಗಿಯನ್ನು ಮದುವೆ ಆಗಿದ್ದಾರೆ.
ಮಣ್ಣು ಮಾಡಿದ ವ್ಯಕ್ತಿ ಮತ್ತೆ ಬಂದಿರುವುದು ನಂಬಲು ಅಸಾಧ್ಯವಾದ ವಿಚಾರ. ಈ ಕಾರಣಕ್ಕೆ ವ್ಯಾಪಕ ಚರ್ಚೆಯಾಗಿದ್ದು, ಮಣ್ಣು ಮಾಡಿದ್ದ ವ್ಯಕ್ತಿ ಇವರೇನಾ ಅಥವಾ ಈಗ ಸಿಕ್ಕಿದ ವ್ಯಕ್ತಿ ಈರಣ್ಣನಾ ಎಂಬ ಜಿಜ್ಞಾಸೆ ಶುರುವಾಗಿದೆ. ಎಲ್ಲದಕ್ಕೂ ಡಿಎನ್ಎ ಪರೀಕ್ಷೆ ಮಾತ್ರ ಉತ್ತರ ನೀಡಬಹುದು ಎನ್ನುತ್ತಾರೆ ತಜ್ಞರು.
ಕಳೆದೊಂದು ತಿಂಗಳಿಂದ ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯಲ್ಲಿ ಇದೇ ಚರ್ಚೆ ನಡೆಯುತ್ತಿದ್ದು ಈಗ ಮಾಧ್ಯಮಗಳ ಮೂಲಕ ಮತ್ತೆ ಸುದ್ದಿಯಾಗುತ್ತಿದೆ.