Advertisement

Bengaluru: ರೌಡಿಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

03:47 PM Jun 14, 2024 | Team Udayavani |

ಬೆಂಗಳೂರು: ಜ್ಞಾನಭಾರತಿ ಬಳಿಯ ಮುತ್ತುರಾಯ ನಗರದಲ್ಲಿ ಬುಧವಾರ ರಾತ್ರಿ ರೌಡಿ ನಾಗರಾಜ ಅಲಿಯಾಸ್‌ ನಾಗ ಎಂಬಾತ ನನ್ನು ಎದುರಾಳಿ ಗ್ಯಾಂಗ್‌ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದೆ.

Advertisement

ಮುತ್ತುರಾಯನಗರದ ನಾಲ್ಕನೇ ಅಡ್ಡರಸ್ತೆ ಬದಿಯಲ್ಲಿ ನಾಗರಾಜನ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಮಚ್ಚು ಲಾಂಗ್‌ಗಳಿಂದ ಆತನನ್ನು ಕೊಚ್ಚಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಆರೋಪಿಗಳ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಅವರನ್ನು ಬಂಧಿಸಲು ಖಾಕಿ ಕಾರ್ಯಾಚರಣೆ ನಡೆಸುತ್ತಿದೆ. ಮುತ್ತುರಾಯ ನಗರದ ನಾಗರಾಜ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿ ಯಾಗಿದ್ದು, ಬ್ಯಾಟರಾಯನಪುರ ಠಾಣೆಯ ರೌಡಿಶೀಟರ್‌ ಆಗಿದ್ದ.

ನಾಗ ರಾಜನ ವಿರುದ್ಧ ಕೊಲೆ, ಡಕಾಯಿತಿಗೆ ಸಂಚು, ದರೋಡೆ ಸೇರಿದಂತೆ ಏಳೆಂಟು ಪ್ರಕರಣ ದಾಖಲಾಗಿದ್ದವು. ಈ ಹಿಂದೆ ಕೊಲೆ ಪ್ರಕರಣ ಗಳಲ್ಲಿ ಬಂಧಿತನಾಗಿ ಜೈಲು ಸೇರಿದ್ದ. ನಂತರ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next