Advertisement

ಜಗನ್‌ಮೋಹನ್‌ ರೆಡ್ಡಿ ಶಾಶ್ವತ ಅಧ್ಯಕ್ಷ: ಕಾನೂನು ಬಾಹಿರ ಎಂದ ಚುನಾವಣಾ ಆಯೋಗ

10:19 PM Sep 21, 2022 | Team Udayavani |

ಹೈದರಾಬಾದ್‌: ಆಂಧ್ರಪ್ರದೇಶ ಸಿಎಂ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಅವರನ್ನು ಪಕ್ಷದ ಶಾಶ್ವತ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡುವಂತೆ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಕ್ಕೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.

Advertisement

ಅಲ್ಲದೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಆಯೋಗ, “ಯಾವುದೇ ರಾಜಕೀಯ ಪಕ್ಷವು ಒಬ್ಬ ವ್ಯಕ್ತಿಯನ್ನು ಯಾವುದೇ ಹುದ್ದೆಗೆ ಶಾಶ್ವತವಾಗಿ ನೇಮಿಸುವುದು ಕಾನೂನು ಬಾಹಿರವಾಗಿದೆ. ಇದನ್ನು ಸಹಿಸಲಾಗದು’ ಎಂದು ಹೇಳಿದೆ.

“ರಾಜಕೀಯ ಪಕ್ಷದ ಯಾವುದೇ ಹುದ್ದೆಗೆ ನಿಗದಿತ ಅವಧಿಯ ನಂತರವೂ ಚುನಾವಣೆ ಘೋಷಿಸದಿರುವುದು, ಚುನಾವಣೆ ನಡೆಸದಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಅಲ್ಲದೇ ಇದು ಕೇಂದ್ರ ಚುನಾವಣಾ ಆಯೋಗದ ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ,’ ಎಂದೂ ಆಯೋಗದ ಪ್ರಕಟಣೆ ತಿಳಿಸಿದೆ.

ಮಾಧ್ಯಮಗಳ ವರದಿಗೆ ಸಂಬಂಧಿಸಿದಂತೆ ಆಂತರಿಕ ತನಿಖೆಗೆ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಮುಂದಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next