Advertisement

ಪರ್ಸಂಟೇಜ್‌ ಆರೋಪ: ಸಮಿತಿ ರಚಿಸಲು ಸವಾಲು

06:40 AM Feb 07, 2018 | |

ವಿಧಾನಪರಿಷತ್‌: ಸರ್ಕಾರ ಕಾಮಗಾರಿಗಳಿಗೆ ಶೇ. 10 ಕಮಿಷನ್‌ ಪಡೆಯುತ್ತಿರುವುದು ಹೌದು ಎಂದು ಹೇಳಿರುವ ಪ್ರತಿಪಕ್ಷದ ನಾಯಕ
ಈಶ್ವರಪ್ಪ, ಈ ಬಗ್ಗೆ ತನಿಖೆಗೆ ವಿ.ಎಸ್‌.ಉಗ್ರಪ್ಪ ನೇತೃತ್ವದಲ್ಲೇ ಸದನ ಸಮಿತಿ ರಚನೆಯಾಗಲಿ ಎಂದು ಸವಾಲು ಹಾಕಿದ್ದಾರೆ.

Advertisement

ಕಾನೂನು ಸುವ್ಯವಸ್ಥೆ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಮಾತನಾಡಿ, ಪ್ರಧಾನಿ ಮೋದಿ, ರಾಜ್ಯಕ್ಕೆ
ಆಗಮಿಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಮಿಷನ್‌ ಪಡೆಯುತ್ತಿದೆ ಎಂದು ಹೇಳಿದ್ದಾರೆ. ಕಮಿಷನ್‌ ಪಡೆಯುವುದು ಅಪರಾಧ. ದಾಖಲೆ
ಇದ್ದರೆ ರಾಜ್ಯ ಸರ್ಕಾರದ ವಿರುದಟಛಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, ಪ್ರಧಾನಿ ಹೇಳಿಕೆಯಂತೆ ರಾಜ್ಯ ಸರ್ಕಾರದ ಕಮೀಷನ್‌ ಪಡೆಯುತ್ತಿದೆ. ನಿಮ್ಮ ನೇತೃತ್ವದಲ್ಲೇ
ಸಮಿತಿ ರಚನೆಯಾಗಲಿ. ನಾನು ಆರೋಪ ಸಾಬೀತುಪಡಿಸುವೆ ಇಲ್ಲದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next