Advertisement

ಕೋಸ್ಟಲ್‌ವುಡ್‌ನ‌ಲ್ಲಿ ಪೆಪ್ಪೆರೆರೆ ಪೆರೆರೆರೆ ಸಡಗರ

11:10 PM Jun 05, 2019 | Sriram |

ಏರ್‌ಪೋರ್ಟ್‌ಗೆಂದು ಹೊರಟ ಸ್ನೇಹಿತರು. ಅಲ್ಲಿಂದ ವಿದೇಶಕ್ಕೆ ಹೋಗಿ ಲೈಫ್‌ ಸೆಟ್ಲ ಮಾಡಬೇಕು ಎಂಬುದು ಅವರ ಯೋಚನೆ. ಆದರೆ, ಏರ್‌ಪೋರ್ಟ್‌ಗೆ ಹೋಗುವವರು ಯಾವುದೋ ಕಾರಣದಿಂದ ವಿಮಾನ ಹತ್ತುವ ಬದಲು ಸೆಟ್ಲ ಬಸ್‌ನಲ್ಲಿ ವಾಪಾಸ್‌ ಬರುತ್ತಾರೆ. ಸೆಟ್ಲ ಬಸ್‌ನಲ್ಲಿ ಹೊರಟವರು ಮುಂದೆ ತನ್ನ ಲೈಫ‌ನ್ನು ಇಲ್ಲೇ ಸೆಟ್ಲ ಮಾಡುತ್ತಾರೆ!

Advertisement

ಇದು ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್‌ನ ಕನಸಿನಲ್ಲಿರುವ ‘ಪೆಪ್ಪೆರೆರೆ ಪೆರೆರೆರೆ’ ತುಳು ಸಿನೆಮಾದ ಒನ್‌ಲೈನ್‌ ಸ್ಟೋರಿ. ಲೈಫ್‌ ಸೆಟ್ಲ ಮಾಡುವ ಹಂತದಲ್ಲಿ ಎದುರಾಗುವ ಸಂಗತಿಗಳೇ ಈ ಸಿನೆಮಾ. ಕಾಮಿಡಿಯನ್ನೇ ಮುಖ್ಯ ನೆಲೆಯಲ್ಲಿಟ್ಟು ಕಥೆಯೊಂದನ್ನು ಮನ ತಟ್ಟುವ ರೀತಿಯಲ್ಲಿ ಪ್ರಸ್ತುತಪಡಿಸಿದ ‘ಪೆಪ್ಪೆರೆರೆ ಪೆರೆರೆರೆ’ ಸಿನೆಮಾ ಸದ್ಯ ಕೋಸ್ಟಲ್ವುಡ್‌ನ‌ಲ್ಲಿ ಹೊಸ ನಿರೀಕ್ಷೆಯ ಸಿನೆಮಾ ಎಂಬ ಮಾರ್ಕ್‌ನಲ್ಲಿದೆ.

ಕೆಲವು ಸಿನೆಮಾದ ಟೈಟಲ್ಗಳೆ ಸೌಂಡ್‌ ಮಾಡುತ್ತದೆ. ಆದರೆ, ಈ ಸಿನೆಮಾದ ಸೌಂಡೇ ಟೈಟಲ್ ಆಗಿದೆ ಎಂಬುದು ವಿಶೇಷ.

ಖ್ಯಾತ ನಟ ಶೋಭರಾಜ್‌ ಪಾವೂರು ಆ್ಯಕ್ಷನ್‌ ಕಟ್ ಹೇಳಿದ ‘ಪೆಪ್ಪೆರೆರೆ ಪೆರೆರೆರೆ’ ತುಳು ಸಿನೆಮಾ ಶೂಟಿಂಗ್‌ ಪೂರ್ಣಗೊಳಿಸಿ ಈಗ ಕೊನೆಯ ಹಂತದ ಸಿದ್ಧತೆಯಲ್ಲಿದೆ. ತುಳು ರಂಗಭೂಮಿ, ಸಿನೆಮಾ, ಕನ್ನಡ ಸಿನೆಮಾ, ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿದ ಶೋಭರಾಜ್‌ ಪೆಪ್ಪೆರೆರೆ ಪೆರೆರೆರೆ ಸಿನೆಮಾವನ್ನು ರೆಡಿ ಮಾಡಿದ್ದಾರೆ. ಅವರೇ ಹೇಳುವ ಪ್ರಕಾರ ಇದೊಂದು ಬಹುನಿರೀಕ್ಷೆಯ ಸಿನೆಮಾ. ಹೀಗಾಗಿ ಯಾವುದೇ ಅವಸರ ಮಾಡದೆ, ಎಲ್ಲವೂ ಸಿದ್ಧವಾದ ಬಳಿಕ ಸಿನೆಮಾ ಬಗ್ಗೆ ಮಾತನಾಡಲಿದ್ದೇನೆ. ಇದಕ್ಕಾಗಿಯೇ ಸುದ್ದಿ ಮಾಡದೆ ಶೂಟಿಂಗ್‌ ಮುಗಿಸಿದ್ದೇವೆ. ಎರಡು ಹಾಡಿನ ಶೂಟಿಂಗ್‌ ಕೆಲವೇ ದಿನದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕರಾವಳಿಯ ಸೂಪರ್‌ ಸ್ಟಾರ್‌ಗಳಾದ ನವೀನ್‌ ಡಿ. ಪಡೀಲ್, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಸತೀಶ್‌ ಬಂದಳೆ, ಸಾಯಿಕೃಷ್ಣ, ಜೆ.ಪಿ. ತೂಮಿನಾಡ್‌ ಸೇರಿದಂತೆ ಹಲವು ಕಲಾವಿದರು ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚೈತ್ರ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶೋಭರಾಜ್‌ ಆ್ಯಕ್ಷನ್‌ ಕಟ್ ಹೇಳುವ ಜತೆಗೆ ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಗುರು ಬಾಯಾರ್‌ ಸಿನೆಮಾಕ್ಕೆ ಸಂಗೀತ ಒದಗಿಸಿದ್ದಾರೆ.

Advertisement

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next