Advertisement

ಆಧಾರ್‌ಗಾಗಿ ಜನರ ಪರದಾಟ

09:31 AM Jun 23, 2019 | Team Udayavani |

ರಾಂಪುರ: ಆಧಾರ ಕಾರ್ಡ್‌ಗಾಗಿ ರಾತ್ರಿಯಿಡೀ ಬ್ಯಾಂಕ್‌ ಮತ್ತು ತಹಶೀಲ್ದಾರ್‌ ಕಚೇರಿ ಎದುರು ಜಾಗರಣೆ ಮಾಡುವಂತಾಗಿದೆ.

Advertisement

ಹೌದು, ನಿತ್ಯ ಗ್ರಾಮೀಣ ಜನರು ನಗರದ ಕೋಟಿಕ್‌ ಮಹೇಂದ್ರ ಬ್ಯಾಂಕ್‌, ಸಿಂಡಿಕೇಟ್ ಬ್ಯಾಂಕ್‌, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ತಹಶೀಲ್ದಾರ್‌ ಕಚೇರಿ ಎದುರು ಕಳೆದ 10 ದಿನದಿಂದ ಆಧಾರ್‌ ಕಾರ್ಡ್‌ ಮಾಡಿಸಲು ಮತ್ತು ಅಪ್‌ಡೇಟ್ ಮಾಡಲು ರಾತ್ರಿಯೇ ಮಹಿಳೆಯರು, ಮಕ್ಕಳು ವಯೋವೃದ್ಧರು ಹಾಸಿಗೆಯೊಂದಿಗೆ ರಾತ್ರಿಯೇ ಬಂದು ಮಲಗುತ್ತಿರುವ ಪ್ರಸಂಗ ಜನರಿಗೆ ಎದುರಾಗಿದೆ. ಸರ್ಕಾರದ ಯೋಜನೆಗಳ ಸವಲತ್ತು ಪಡೆಯಲು ಆಧಾರ ಕಾರ್ಡ್‌ ಕಡ್ಡಾಯ ಮಾಡಿದೆ. ಹೀಗಾಗಿ ಆಧಾರ ಕಾರ್ಡ್‌ ಮಾಡಿಸಲು ಗ್ರಾಮೀಣ ಜನರು ಪಡಬಾರದ ಕಷ್ಟ ಪಡುತ್ತಿದ್ದಾರೆ.

ದಿನಕ್ಕೆ 15 ಮಾತ್ರ: ಒಂದು ದಿನಕ್ಕೆ ಕೇವಲ 15 ಜನರಿಗೆ ಮಾತ್ರ ಬ್ಯಾಂಕ್‌ನಲ್ಲಿ ಆಧಾರ್‌ ಕಾರ್ಡ್‌ ಮಾಡಿ ಕೊಡಲಾಗುತ್ತಿದೆ. ಹೀಗಾಗಿ ರಾತ್ರಿಯೇ ಬಂದು ಬ್ಯಾಂಕ್‌ ಮುಂದೆ ಜನ ಮಲಗುತ್ತಿದ್ದಾರೆ. ದಿನನಿತ್ಯ ಆಧಾರ್‌ ಕಾರ್ಡ್‌ಗಾಗಿ ಸಾರ್ವಜನಿಕರು ಪರದಾಡುತ್ತಿದ್ದು, ಜನ ಅನಿವಾರ್ಯವಾಗಿ ಖಾಸಗಿ ಬ್ಯಾಂಕ್‌ಗಳ ಮುಂದೆ ಕಾದು ಕುಳಿತುಕೊಂಡಿದ್ದಾರೆ.

ಆಧಾರ್‌ ಕಾರ್ಡ್‌ ಮಾಡಿಸುವುದು ಮತ್ತು ಅಫ್‌ಡೇಟ್ ಮಾಡಲು ಕೆಲ ಬ್ಯಾಂಕ್‌ಗಳು ನಿಗದಿತ ದರ ಆಕರಣೆ ಮಾಡುತ್ತಿದ್ದು, ನಿಗದಿತ ಶುಲ್ಕಗಿಂತ ಹೆಚ್ಚಿನ ಹಣ ಸಾರ್ವಜನಿಕರಿಂದ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next