Advertisement

“ಸಿಎಎ ವಿರುದ್ಧ ಜನರ ಹೋರಾಟ’: ದಿನೇಶ್‌ ಗುಂಡೂ ರಾವ್‌

01:45 AM Jan 20, 2020 | Sriram |

ಉಡುಪಿ: ಸಿಎಎ ವಿರುದ್ಧ ನಡೆಯುತ್ತಿ ರುವ ಹೋರಾಟ ಕಾಂಗ್ರೆಸ್‌ನದಲ್ಲ, ಜನರು ಸ್ವಯಂ ಪ್ರೇರಣೆಯಿಂದ ಹೋರಾಟ ಕೈಗೆತ್ತಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಎ ಕೇಂದ್ರದ್ದು. ಅನೇಕ ರಾಜ್ಯಗಳು ತಿರಸ್ಕರಿಸಿವೆ. ಸುಪ್ರೀಂ ಕೋರ್ಟ್‌ ಮುಂದೆಯೂ ಆ ವಿಚಾರ ಇದೆ. ಅದು ಜನಪರ ನಿರ್ಧಾರ ಕೈಗೊಳ್ಳುವ ಭರವಸೆ ಇದೆ ಎಂದರು.

ಅಮಿತ್‌ ಶಾ ಭಾಷಣದ ಮೂಲಕ ರಾಜ್ಯದ ಜನತೆಯ ದಾರಿ ತಪ್ಪಿಸಿದ್ದಾರೆ. ಧರ್ಮದ ಆಧಾರದಲ್ಲಿ ವಿಭಜನೆ ಮಾಡಬೇಡಿ, ಒಂದು ಸಮುದಾಯವನ್ನು ದ್ವೇಷ ಮಾಡುವುದ‌ು ಸಂವಿಧಾನ ವಿರೋಧಿ ಎಂದು ಮಾತ್ರ ನಾವು ಹೇಳಿದ್ದೇವೆ. ಕಾಯಿದೆ ಜಾರಿಗೊಳ್ಳುವುದರಿಂದ ಸಮಾಜದಲ್ಲಿ ಸಮಸ್ಯೆ ಉಂಟಾಗಬಾರದು ಎಂಬುದು ನಮ್ಮ ಉದ್ದೇಶ ಎಂದರು.

ಗುಹಾ ಹೇಳಿಕೆಗೆ ಪ್ರತಿಕ್ರಿಯೆ
ಕೇರಳದ ಜನರು ರಾಹುಲ್‌ ಆಯ್ಕೆ ಮಾಡಿರುವುದು ದೊಡ್ಡ ದುರಂತ ಎಂಬ ಇತಿಹಾಸ ತಜ್ಞ ರಾಮಚಂದ್ರ ಗುಹಾ ಹೇಳಿಕೆಗೆ ಪ್ರತಿಕ್ರಿಯಿಸಿದ ದಿನೇಶ್‌ ಗುಂಡೂರಾವ್‌, ಇದು ಅವರ ವೈಯಕ್ತಿಕ ಅಭಿಪ್ರಾಯ. ಗಾಂಧಿ ಕುಟುಂಬ ಮತ್ತು ರಾಹುಲ್‌ ಗಾಂಧಿ ದೇಶಕ್ಕೆ ಬಹಳ ದೊಡ್ಡ ಸೇವೆ ಕೊಟ್ಟಿದ್ದಾರೆ. ಕಾಂಗ್ರೆಸ್‌ಗೆ ರಾಹುಲ್‌ ಗಾಂಧಿ ನಾಯಕತ್ವದ ಅಗತ್ಯ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next