Advertisement

ಬೆಂಕಿ ನಂದಿಸಲು ಜನರ ಸಹಕಾರ ಅವಶ್ಯಕ

07:34 PM Mar 04, 2021 | Team Udayavani |

ಸಂಡೂರು: ಅರಣ್ಯ ಇಲಾಖೆ ಅರಣ್ಯಕ್ಕೆ ಬೀಳುವ ಬೆಂಕಿ ನಂದಿಸಲು ಹಗಲಿರಳು ಹೋರಾಟಮಾಡುವ ಸ್ಥಿತಿಯಿದ್ದು ಸಾರ್ವಜನಿಕರು ಸಹಕರಿಸಿದರೆ ಅರಣ್ಯಕ್ಕೆ ಬೆಂಕಿ ಬೀಳದಂತೆ ತಡೆಯಲು ಪ್ರಯತ್ನಿಸುತ್ತೇವೆ ಎಂದು ವಲಯ ಅರಣ್ಯ ಅಧಿಕಾರಿ ದಾದಾಖಲಂದರ್‌ ನುಡಿದರು.

Advertisement

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಇಡೀ ದಿನ ಮತ್ತು ರಾತ್ರಿವರೆಗೂ ಬಳ್ಳಾರಿರಸ್ತೆಯಲ್ಲಿರುವ  ತಿಮ್ಮಪ್ಪನ ಗುಡಿ ಭಾಗದ ಕಾಡಿಗೆ ಯಾರೋ ದುಷ್ಟರು ಬೆಂಕಿ ಹಚ್ಚಿದ ಪರಿಣಾಮ ಇಡೀ ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಕಾರದಿಂದ ಬೆಂಕಿಯನ್ನು ಹರಸಾಸದಿಂದ ನಂದಿಸಲು ಸಾಧ್ಯವಾಗಿದೆ.

ಸಾರ್ವ ಜನಿಕರ ಬೆಂಬಲದಿಂದ ಈ ಕಾರ್ಯ ಮಾಡಿದ್ದೇವೆ. ಬೆಂಕಿ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಇಲಾಖೆಗೆ ಸಂಪರ್ಕಿಸಿ, ಅಗ್ನಿಶಾಮಕ ಠಾಣೆಗಾದರೂ ತಿಳಿಸಿ ಬೆಂಕಿ ಆರಿಸಲು ಸಹಕರಿಸಿ ಎಂದರು

Advertisement

Udayavani is now on Telegram. Click here to join our channel and stay updated with the latest news.

Next