Advertisement

ನಾವು ದೇವರೆಂದು ಜನರು ಹೇಳಬೇಕು; ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮಾರ್ಮಿಕ ಮಾತು

01:24 AM Sep 07, 2024 | Team Udayavani |

ಪುಣೆ: “ನಾವು ದೇವರಂತೆಯೋ, ಅಲ್ಲವೋ ಎಂಬುದನ್ನು ಜನರು ನಿರ್ಧರಿಸುತ್ತಾರೆ. ನಾನು ದೇವರು ಎಂದು ನಾವೇ ಘೋಷಿಸಿಕೊಳ್ಳಬಾರದು’ ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

Advertisement

ಪುಣೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಶಾಂತ ಸ್ಥಿತಿಯಲ್ಲಿರುವ ಬದಲು ನಾವು ಮಿಂಚಿನಂತೆ ಹೊಳೆಯಬೇಕು ಎಂದು ಕೆಲವರು ಭಾವಿಸುತ್ತಾರೆ. ಆದರೆ ಒಮ್ಮೆ ಮಿಂಚು ಅಪ್ಪಳಿಸಿದ ಬಳಿಕ ಆ ಪ್ರದೇಶವು ಮೊದಲಿಗಿಂತ ಹೆಚ್ಚು ಕತ್ತಲಾಗುತ್ತದೆ. ಆದ್ದರಿಂದ ಅಗತ್ಯವಿದ್ದಾಗ ದೀಪದಂತೆ ಬೆಳಗಬೇಕು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಮಣಿಪುರದ ಪ್ರಸ್ತುತ ಪರಿಸ್ಥಿತಿ ಬಗ್ಗೆ ಮಾತನಾಡಿ, ಮಣಿಪುರದ ಪ್ರಸ್ತುತ ಸ್ಥಿತಿ ದಯನೀಯವಾಗಿದೆ ಮತ್ತು ಸವಾಲಿನಿಂದ ಕೂಡಿದೆ. ಇಂತಹ ಪರಿಸ್ಥಿತಿಯಲ್ಲೂ ಆರೆಸ್ಸೆಸ್‌ ಸ್ವಯಂಸೇವಕರು ಅಲ್ಲಿ ದೃಢವಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಿಂಸಾಚಾರ ಉಂಟಾಯಿತೆಂದು ಸಂಘದ ಕಾರ್ಯಕರ್ತರು ಅಲ್ಲಿಂದ ಓಡಿ ಹೋಗುವುದಿಲ್ಲ. ಅವರು ಪರಿಸ್ಥಿತಿಯನ್ನು ಸಹಜತೆಗೆ ಮರಳಿಸಲು ಮತ್ತು ದ್ವೇಷ ತಗ್ಗಿಸಲು ಶ್ರಮಿಸುತ್ತಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next