Advertisement

ಅಸ್ತಮಾ ರೋಗಿಗಳಿಗೆ “ಮೀನು ಪ್ರಸಾದ’

06:00 AM Jun 09, 2018 | Team Udayavani |

ಹೈದರಾಬಾದ್‌: ಹೆಸರೇ “ಮೀನು ಪ್ರಸಾದ’. ಅಷ್ಟಕ್ಕೂ ಇದು ಅಂತಿಂಥ ಪ್ರಸಾದವಲ್ಲ ಎನ್ನುವು ದಕ್ಕೆ ದೇಶ, ವಿದೇಶಗಳಿಂದ ಜನ ತಂಡೋಪ ತಂಡವಾಗಿ ಬಂದು ಇದನ್ನು ಸ್ವೀಕರಿಸುವುದೇ ಸಾಕ್ಷಿ. ಇನ್ನೊಂದು ಗುಟ್ಟು ಏನೆಂದರೆ, ಈ ಪ್ರಸಾದ ಅಸ್ತಮಾಕ್ಕೆ ರಾಮಬಾಣ!

Advertisement

ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಹೆಚ್ಚು ಕಡಿಮೆ 170 ವರ್ಷಗಳಿಂದ ನಡೆದು ಬಂದ ಪದ್ಧತಿ ಇದು. ಈ ವರ್ಷದ ಪ್ರಸಾದ ವಿತರಣೆ ಕಾರ್ಯಕ್ರಮ ಶುಕ್ರವಾರ ಇಲ್ಲಿನ ಪ್ರದರ್ಶನ ಮೈದಾನದಲ್ಲಿ ಆಯೋಜಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಮಂದಿ ಬೆಳಗ್ಗೆಯಿಂದ ಮೀನು ಪ್ರಸಾದ ಸ್ವೀಕರಿಸಿದ್ದಾರೆ. ಈವರೆಗೆ ನಡೆದು ಬಂದಿರುವಂತೆ, ವರ್ಷದಲ್ಲಿ ಒಂದು ದಿನ ಮೀನು ಪ್ರಸಾದ ವಿತರಿಸಲಾಗುತ್ತದೆ.

ಯಾಕಾಗಿ ಮೀನು ಪ್ರಸಾದ?: ಅಚ್ಚರಿಯಾ ದರೂ ಇದು ಸತ್ಯ. ಇಲ್ಲಿ ನೀಡಲಾಗುವ ಮೀನು ಪ್ರಸಾದದಿಂದ ಅಸ್ತಮಾ ನಿಯಂತ್ರಣ ಸಾಧ್ಯ ಎನ್ನುವ ನಂಬಿಕೆ ಇದೆ. ಈ ಹಿಂದೆ ಮೀನು ಪ್ರಸಾದ ಸ್ವೀಕರಿಸಿದ ಸಾವಿರಾರು ಮಂದಿ ಹೇಳುವ ಪ್ರಕಾರ, ಇದು ಸತ್ಯ. ಇದೇ ನಂಬಿಕೆಯಾಧಾರದ ಮೇಲೆ 170 ವರ್ಷಗಳಿಂದ ನಡೆದುಬಂದಿದೆ.

ಯಾರು ಇದರ ರೂವಾರಿ?: ಕುಟುಂಬ ವೊಂದು ನೀಡುತ್ತಾ ಬಂದ ನಾಟಿ ಔಷಧ ಇದು. ಬಥಿನಿ ಗೌಡ್‌ ಕುಟುಂಬ ಇದನ್ನು ಆರಂಭಿಸಿ ಕೊಂಡು ಬಂದಿದ್ದು, “ಮೃಗಶಿರ ಕಾರ್ತಿ’ಯ ಬೆಳಗ್ಗೆ 9ರಿಂದ ನೀಡಲಾಗುತ್ತದೆ. ಸ್ವತಃ ತೆಲಂಗಾಣ ಸರಕಾರವೇ ಇದಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಟ್ಟಿದೆ. ಪಶು ಸಂಗೋಪನಾ ಮತ್ತು ಮೀನುಗಾರಿಕಾ ಸಚಿವ ಟಿ.ಶ್ರೀನಿವಾಸ್‌ ಯಾದವ್‌ ಹಾಗೂ ತೆಲಂಗಾಣ ಶಾಸಕಾಂಗ ಸಭೆಯ ಅಧ್ಯಕ್ಷ ಸ್ವಾಮಿ ಗೌಡ್‌ ಶುಕ್ರವಾರದ ಕಾರ್ಯಕ್ರಮ ಉದ್ಘಾಟಿಸಿದ್ದಾರೆ. ಈ ಹಿಂದೆ ಒಮ್ಮೆ ವಿವಾದವಾಗಿತ್ತು.

ಈತನಕ 40 ದೇಶಗಳಿಗೆ ತಲುಪಿದೆ ಮೀನು ಪ್ರಸಾದ
ಮೀನುಗಾರಿಕಾ ಇಲಾಖೆಯಿಂದ 1.30 ಲಕ್ಷ ಮೀನುಗಳ ಮಾರಾಟ
ಈ ತನಕ ಲಕ್ಷಕ್ಕೂ ಹೆಚ್ಚು ಅಸ್ತಮಾ ರೋಗಿಗಳಿಂದ ಪ್ರಸಾದ ಸ್ವೀಕಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next