Advertisement

ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಸಾಹಿಸಿಗಳು…!

10:24 PM Jul 15, 2020 | Hari Prasad |

ಯಾದಗಿರಿ: ಮಳೆ ನೀರು ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯನ್ನು ರಕ್ಷಿಸಿ ಸ್ಥಳೀಯರು ಸಾಹಸ ಮೆರೆದಿದ್ದಾರೆ.

Advertisement

ಯಾದಗಿರಿ ತಾಲೂಕಿನ ಪಗಲಾಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ.

ಹೊಲದಲ್ಲಿ ಹತ್ತಿ ಬಿಡಿಸಲು ತೆರಳಿದ್ದ ಮಹಿಳೆಯರು ಮರಳಿ ಮನೆಗೆ ವಾಪಸ್ ಆಗುವ ವೇಳೆ ಈ ಘಟನೆ ನಡೆದಿದೆ.

ಕೂಲಿ ಕಾರ್ಮಿಕ ಮಹಿಳೆಯರು ಕೆಲಸ ಮುಗಿಸಿ ಆಟೋದಲ್ಲಿ ಕೂಯಿಲೂರು ಮಾರ್ಗವಾಗಿ ಆಶನಾಳಕ್ಕೆ ಹಿಂತಿರುಗುತ್ತಿದ್ದರು.

ಮಾರ್ಗ ಮಧ್ಯದ ಹಳ್ಳ ತುಂಬಿದ್ದ ಹಿನ್ನೆಲೆಯಲ್ಲಿ ಪಗಲಾಪುರ ಬಳಿ ಆಟೋವನ್ನು ಚಾಲಕ ನಿಲ್ಲಿಸಿದ್ದ. ಹೀಗಾಗಿ ಮಹಿಳೆಯರು ಗುಂಪಾಗಿ ಹಳ್ಳ ದಾಟುವ ಸಾಹಸಕ್ಕೆ ಮುಂದಾದ ಸಂದರ್ಭದಲ್ಲಿ ಅವರ ಗುಂಪಿನಲ್ಲಿದ್ದ ಓರ್ವ ಮಹಿಳೆ ನೀರಿನ ರಭಸಕ್ಕೆ ಕೊಚ್ಚಿ ಮುಳುಗತೊಡಗಿದರು.

Advertisement

ಈ ಸಂದರ್ಭದಲ್ಲಿ ಅಲ್ಲೇ ಸಮೀಪದಲ್ಲಿದ್ದ ಯುವಕರ ತಂಡ ಕೂಡಲೇ ಹಳ್ಳಕ್ಕೆ ಜಿಗಿದು ಈಜಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಹಿಳೆಯ ಜೀವವನ್ನು ರಕ್ಷಿಸಿದ್ದಾರೆ.

ಜಿಲ್ಲೆಯಾದ್ಯಂತ ಇಂದು ಬೆಳಿಗ್ಗೆಯಿಂದಲೇ ಧಾರಾಕರ ಮಳೆ ಸುರಿಯತೊಡಗಿದ್ದು ಬಹುತೇಕ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ಅತೀ ಹೆಚ್ಚು ಮಳೆ ಯಾದಗಿರಿಯ ಸುತ್ತಮುತ್ತಲಿನ ಭಾಗದಲ್ಲಿ ಸುರಿದಿದೆ. ಜಿಲ್ಲೆಯಲ್ಲಿ ಸರಾಸರಿ 20.95 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next