Advertisement

ರಾಜಸ್ಥಾನ ಸಿಎಂ ರಾಜೇ ಬದಲಿಸಿ: ಒತ್ತಾಯ

03:45 AM Feb 13, 2017 | |

ಜೈಪುರ: ವಸುಂಧರಾ ರಾಜೇ ಅವರನ್ನು ರಾಜಸ್ಥಾನ ಮುಖ್ಯಮಂತ್ರಿ ಸ್ಥಾನದಿಂದ ಹಾಗೂ ಬಿಜೆಪಿಯಿಂದ ತೆಗೆದು ಹಾಕಬೇಕೆಂಬ ಕೂಗು ಕೇಳಿಬಂದಿದೆ. ಬಿಜೆಪಿಯ ಹಿರಿಯ ಶಾಸಕ ಘನಶ್ಯಾಮ್‌ ತಿವಾರಿ ಈ ಒತ್ತಾಯ ಮಾಡಿದ್ದಾರೆ. ರಾಜೇ ಅವರು ಬಿಜೆಪಿ ಮತ್ತು ಜನಸಂಘದ ಆದರ್ಶಗಳನ್ನು, ಮೌಲ್ಯಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿದ್ದಾರೆ.

Advertisement

ಅವರದು ಏಕತಂತ್ರ ಆಡಳಿತವಾಗಿದೆ ಎಂದು ತಿವಾರಿ ದೂರಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜಸ್ಥಾನದಲ್ಲಿ ಪಕ್ಷ ಸಂಪೂರ್ಣವಾಗಿ ನಿರ್ಮೂಲನೆಯಾಗುತ್ತದೆ ಎಂದು ಗುಡುಗಿದ್ದಾರೆ. ಜನಸಂಘ ಸಂಸ್ಥಾಪಕ ದೀನ್‌ದಯಾಳ್‌ ಉಪಾಧ್ಯಾಯ ಸ್ಮರಣೆಯ ಕಾರ್ಯಕ್ರಮ ಮುಕ್ತಾಯದ ಬೆನ್ನಲ್ಲೇ ಸಿಎಂ ವಿರುದ್ಧದ ಬಿನ್ನಮತದ ಕೂಗು ಕೇಳಿ ಬಂದಿದೆ. ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಅಶೋಕ್‌ ಪರ್ನಮಿ, ತಿವಾರಿ ವಿರುದ್ಧ ಶಿಸ್ತು ಕ್ರಮಕ್ಕೆ ಚಿಂತಿಸಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next