Advertisement

ಎಲ್ಲವೂ ಬಂದ್.. ಪಡಿತರ ಅಕ್ಕಿಯನ್ನು ಮನೆಗೆ ಕೊಂಡೊಯ್ಯುವುದೇ ಸಮಸ್ಯೆ!

11:44 AM May 10, 2021 | Team Udayavani |

ಕಟಪಾಡಿ: ಪಡಿತರ ಖರೀದಿಸಿದವರು ಮನೆಗೆ ಸಾಗಿಸಲು ವಾಹನದ ವ್ಯವಸ್ಥೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿ ದೃಶ್ಯಗಳು ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಕಂಡುಬಂತು.

Advertisement

ಖರೀದಿಸಿದಂತಹ ಸುಮಾರು 40 50 ಕಿಲೋ ಅಕ್ಕಿಯನ್ನು ಮನೆಗೆ ಸಾಗಿಸಲು ಪರದಾಡುವಂತಹ ಪರಿಸ್ಥಿತಿ ಕಂಡುಬರುತ್ತಿದೆ. ಖರೀದಿದಾರರು ಈ ಬಗ್ಗೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದು ಕನಿಷ್ಠ ಎರಡು ಮೂರು ಆಟೋ ರಿಕ್ಷಾದ ವ್ಯವಸ್ಥೆಯನ್ನು ಆದರೂ ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ.

ಕಟಪಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಉದ್ಯಾವರ, ಕಟಪಾಡಿ, ಕೋಟೆ, ಮತ್ತಿತರೆಡೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಘದ ಅಧ್ಯಕ್ಷ ಇಂದು ಶೇಖರ ಸುವರ್ಣ ಅವರು ಸ್ಥಳೀಯ ಅಧಿಕಾರಿವರ್ಗದವರು ಸ್ಪಂದಿಸಿ ಸರಕಾರದ ಸವಲತ್ತು ಜನರ ಮನೆಬಾಗಿಲಿಗೆ ತಲುಪುವಲ್ಲಿ ವ್ಯವಸ್ಥೆಯೊಂದಿಗೆ ಸಹಕರಿಸುವಂತೆ ವಿನಂತಿಸಿಕೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next