Advertisement

ಶಿವಸೇನೆಯನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ: ವಿಪಕ್ಷ

03:42 PM Jan 23, 2018 | Team Udayavani |

ಮುಂಬಯಿ : ದೇಶದ ಜನರು ಶಿವಸೇನೆಯ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ ಎಂದು ವಿರೋಧ ಪಕ್ಷಗಳು ಕಟಕಿಯಾಡಿವೆ.

Advertisement

2019ರ ಲೋಕಸಭಾ ಚುನಾವಣೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಯನ್ನು ತಾನು ಏಕಾಂಗಿಯಾಗಿ ಎದುರಿಸುವೆ; ಬಿಜೆಪಿ ಜತೆ ಸೇರಿಕೊಳ್ಳುವುದಿಲ್ಲ ಎಂಬ ಶಿವಸೇನೆಯ ಮಾತುಗಳನ್ನು ಕಾಂಗ್ರೆಸ್‌ ಮತ್ತು ಎನ್‌ಸಿಪಿ ಹಾಸ್ಯಾಸ್ಪದ ಎಂದು ಟೀಕಿಸಿವೆ. 

ಬಿಜೆಪಿ ಜತೆ ಸೇರುವುದಿಲ್ಲ ಎಂದಾದರೆ ಶಿವಸೇನೆ ಈಗಲೂ ಏಕೆ ಬಿಜೆಪಿ ನೇತೃತ್ವದ ಸರಕಾರದಲ್ಲಿದೆ ಎಂದು ಮಹಾರಾಷ್ಟ್ರದ ಕಾಂಗ್ರೆಸ್‌ ವಕ್ತಾರ ಸಚಿನ್‌ ಸಾವಂತ್‌ ಪ್ರಶ್ನಿಸಿದ್ದಾರೆ. 

ಎನ್‌ಸಿಪಿ ವಕ್ತಾರ ನವಾಬ್‌ ಮಲಿಕ್‌ ಅವರು “ಶಿವಸೇನೆ ಮೊದಲು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರಕಾರದಿಂದ ಹೊರಬಂದು ಮಧ್ಯವಧಿ ಚುನಾವಣೆ ಎದುರಿಸಬೇಕು; ನಾವಂತೂ ಚುನಾವಣೆಗೆ ಸಿದ್ಧರಿದ್ದೇವೆ’ ಎಂದು ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next