Advertisement
ತಾಲೂಕಿನ ಮಾರ್ಸನಳ್ಳಿ ಗ್ರಾಮದಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇಂದು ದೇಶಾದ್ಯಂತ ಭಾರತೀಯ ಜನತಾ ಪಕ್ಷದ ಅಲೆ ಹೆಚ್ಚಾಗಿದೆ ಎಂದರು.
ಸತ್ಯಕ್ಕೆ ದೂರವಾದ ಮಾತು. ತಾಲೂಕಿನಲ್ಲಿ ಬಿಜೆಪಿ ಮುಖಂಡರೆಲ್ಲರೂ ಒಗ್ಗಟ್ಟಾಗಿದ್ದೇವೆ. ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಟಿಕೆಟ್ ಬೇಡುವುದು ಬಿಜೆಪಿ ಸಾಮಾನ್ಯ ಕಾರ್ಯಕರ್ತರ ಹಕ್ಕು. ಕೊಡುವುದು ಬಿಡುವುದು ವರಿಷ್ಠರಿಗೆ
ಬಿಟ್ಟ ವಿಚಾರ.
Related Articles
ಸಂಚರಿಸಿ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದೇನೆ. ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯವಾಗಿದೆ.
Advertisement
ಬಿ.ಎಸ್. ಯಡಿಯೂರಪ್ಪನವರ ಆಡಳಿತ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ರಾಜ್ಯದಲ್ಲಿ ನಡೆದಿವೆ. ಕಾರ್ಯಕರ್ತರು ಹಿಂದಿನ ಅಧಿಕಾರವಧಿಯಲ್ಲಿ ಮಾಡಿರುವ ಸಾಧನೆಯನ್ನು ಸಾಮಾನ್ಯ ಜನರಿಗೆ ಮನ ಮುಟ್ಟುವಂತೆ ಪ್ರತಿ ಮನೆ ಮನೆ ಸಂಚರಿಸಿ ತಿಳಿಸಬೇಕು. ಈ ಮೂಲಕ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ಕೈ ಬಲಪಡಿಸೋಣ ಎಂದು ಹೇಳಿದರು.
ಬಸುಗೌಡ ಬಿರಾದಾರ, ಎಸ್.ಟಿ. ಪಾಟೀಲ, ಮಲ್ಲು ಗುಡ್ಲ, ಚಂದ್ರಶೇಖರ ಹಳೆಂಬರ, ವಿಠ್ಠಲ ಯಾಳಗಿ, ಗುರು ಶಿರಶ್ಯಾಡ, ಬಾಪುಗೌಡ ಪಾಟೀಲ, ಜಟ್ಟಿಂಗರಾಯ ಜಮಾದಾರ, ದ್ಯಾಮಗೊಂಡ ಜಮಾದಾರ, ಸಿದ್ದರಾಮಜಮಾದಾರ ಇದ್ದರು.