Advertisement

Pension ಇನ್ನು ದೇಶದ ಯಾವುದೇ ಬ್ಯಾಂಕ್‌,ಶಾಖೆಗಳಲ್ಲೂ ಲಭ್ಯ!

12:52 AM Sep 06, 2024 | Team Udayavani |

ಹೊಸದಿಲ್ಲಿ: ಮುಂದಿನ ವರ್ಷದ ಜನವರಿ 1ರಿಂದ ಪಿಂಚಣಿದಾರರು ದೇಶದ ಯಾವುದೇ ಮೂಲೆಯಲ್ಲಿ, ಯಾವುದೇ ಬ್ಯಾಂಕ್‌ನ ಯಾವುದೇ ಶಾಖೆಯಿಂದಾದರೂ ತಮ್ಮ ಪಿಂಚಣಿ ಮೊತ್ತ ವಿತ್‌ಡ್ರಾ ಮಾಡಬಹುದು. ಇಂಥದ್ದೇ ಬ್ಯಾಂಕ್‌, ಶಾಖೆಯಲ್ಲಿಯೇ ಮೊತ್ತ ಪಾವತಿ ಆಗಬೇಕು ಎಂಬ ನಿಯಮ ಇರುವುದಿಲ್ಲ.

Advertisement

ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯ ಪ್ರಸ್ತಾವಕ್ಕೆ ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಸಚಿವ ಮನ್‌ಸುಖ್‌ ಮಾಂಡವಿಯಾ ಅನುಮೋದನೆ ನೀಡಿದ್ದಾರೆ. ಸರ‌ಕಾರಿ ಉದ್ಯೋಗದಲ್ಲಿದ್ದು ನಿವೃತ್ತಿಯಾಗಿ ತಮ್ಮ ಸ್ವಂತ ಊರುಗಳಿಗೆ ತೆರಳಿದ ಹಿರಿಯ ಕಾರ್ಮಿಕರಿಗೆ ಕೂಡ ಇದರಿಂದ ಲಾಭವಾಗಲಿದೆ. ಪಿಂಚಣಿದಾರರು ತಮ್ಮ ಖಾತೆಯನ್ನು ಒಂದು ಬ್ಯಾಂಕ್‌ನಿಂದ ಮತ್ತೂಂದು ಬ್ಯಾಂಕ್‌ಗೆ ವರ್ಗಾಯಿಸಿದರೂ ಪಿಂಚಣಿ ಪಾವತಿ ಸರಾಗವಾಗಿ ಆಗಲಿದೆ. ಮುಂದಿನ ಹಂತದಲ್ಲಿ ಆಧಾರ್‌ ಕಾರ್ಡ್‌ ಮಾಹಿತಿಯನ್ನು ಆಧರಿಸಿ ಪಿಂಚಣಿ ಮೊತ್ತವನ್ನು ಪಾವತಿ ಮಾಡುವ ವ್ಯವಸ್ಥೆ ಕೂಡ ಜಾರಿಯಾಗಲಿದೆ ಎಂದು ಕೇಂದ್ರ ಸಚಿವ ಮಾಂಡವಿಯಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next