Advertisement

ವೃದ್ಧೆಗೆ ಒಂದೇ ದಿನದಲ್ಲಿ ಪಿಂಚಣಿ ಭಾಗ್ಯ

05:22 PM Aug 25, 2021 | Team Udayavani |

ಗುಡಿಬಂಡೆ: ಗ್ರಾಪಂ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ನಂತರ ವೃದ್ಧೆ ಮನವಿಗೆ ಸ್ಪಂದಿಸಿದ ಶಾಸಕ ಸುಬ್ಟಾರೆಡ್ಡಿ ಮಾಡಿದ ಆದೇಶದಂತೆ
ತಹಶೀಲ್ದಾರ್‌ ಸಿಗ್ಬತ್ತುಲ್ಲಾ ಒಂದೇ ದಿನದಲ್ಲೇ ಆಕೆಗೆ ಪಿಂಚಣಿ ಆದೇಶ ಮಾಡಿ, ಅಂಚೆ ಕಚೇರಿಯಲ್ಲಿ ಖಾತೆ ಪುಸ್ತಕ ತೆರೆದಿದ್ದಾರೆ.

Advertisement

ತಾಲೂಕಿನ ದಪ್ಪರ್ತಿ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಎಸ್‌. ಎನ್‌.ಸುಬ್ಟಾರೆಡ್ಡಿ ಆಗಮಿಸಿದ್ದ ಸಮಯದಲ್ಲಿ ಕಾಟೈಗಾರಹಳ್ಳಿ ಗ್ರಾಮದ ವೃದ್ಧೆ ರಂಗಮ್ಮ ಶಾಸಕರ ಬಳಿ ಬಂದು, ನನಗೆ ತುಂಬಾ ವಯಸ್ಸಾಗಿದೆ. ನನಗೆ ದುಡಿಯಲು ಸಹ ಆಗುತ್ತಿಲ್ಲ, ನನ್ನ ಜೀವನ ಸಹ ನಡೆಸಲು ಕಷ್ಟಕರವಾಗಿದೆ, ನನಗೆ ಪಿಂಚಣಿ ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡರು.

ಇದಕ್ಕೆ ಸ್ಪಂದಿಸಿದ ಶಾಸಕರು, ಅಲ್ಲಿಯೇ ಇದ್ದ ತಹಶೀಲ್ದಾರ್‌ ಅವರನ್ನು ಕರೆಯಿಸಿ ಆಕೆಯ ದಾಖಲೆಗಳನ್ನು ಪಡೆದುಕೊಂಡು ಅತಿ ಜರೂರಾಗಿ ಪಿಂಚಣಿ ಸೌಲಭ್ಯ ಮಾಡಿಸಿಕೊಡಿ ಎಂದು ಮೌಖೀಕ ಆದೇಶ ಮಾಡಿದರು. ಇದಕ್ಕೆ ತ್ವರಿತಗತಿಯಲ್ಲಿ ಸ್ಪಂದಿಸಿದ ತಹಶೀಲ್ದಾರ್‌, ಗ್ರಾಮ
ಲೆಕ್ಕಾಧಿಕಾರಿ ಸುದರ್ಶನ್‌, ರಾಜಸ್ವ ನಿರೀಕ್ಷಕ ಅಮರನಾರಾಯಣಪ್ಪಅವರನ್ನುಬಳಿಸಿಕೊಂಡು, ಒಂದೇ ದಿನದಲ್ಲೇ ರಂಗಮ್ಮರಿಂದ ಎಲ್ಲಾ ದಾಖಲೆ ಪಡೆದುಕೊಂಡು, ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯಿಸಿ, ಕಂದಾಯ ಇಲಾಖೆಯಲ್ಲಿ ಕಡತವನ್ನು ಸಿದ್ಧಪಡಿಸಿ, ಆಕೆಗೆ ಒಂದೇ ದಿನದಲ್ಲಿ ಪಿಂಚಣಿ ಸೌಲಭ್ಯ ಮಾಡಿಸಿಕೊಟ್ಟಿದ್ದಾರೆ. ಈ ಕಾರ್ಯಕ್ಕೆ ಶಾಸಕ ಎಸ್‌.ಎನ್‌.ಸುಬ್ಟಾರೆಡ್ಡಿ, ಕಂದಾಯ ಇಲಾಖೆಯ ತಹಶೀಲ್ದಾರ್‌ ಸಿಗ್ಬತುಲ್ಲಾ ಮತ್ತು ಸಿಬ್ಬಂದಿಯ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:ಸಮರ್ಥ ನಾಯಕತ್ವ ಕೊರತೆ ನೀಗಿಸಲು ಜೆಡಿಎಸ್‌ ಸಜ್ಜಾಗಿದೆ

ಮಾದರಿ ಕಾರ್ಯ:ರೈತ ಸಂಘದ ವರದರಾಜು ಮಾತನಾಡಿ, ತಹಶೀಲ್ಡಾರ್‌ ಸಿಗ್ಬತುಲ್ಲಾ ಅವರು ಇಲ್ಲಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ, ಅವರು ಬಡ ಬಗ್ಗರ ಸಹಾಯಕ್ಕೆ ನಿಂತು, ಅವರಿಗೆ ಸ್ಥಳದಲ್ಲೇ ಪಿಂಚಣಿ ಸೌಲಭ್ಯ ಒದಗಿಸಿದ್ದಾರೆ. ತಾಂತ್ರಿಕ ದೋಷಗಳಿಂದ ಪಿಂಚಣಿ ಏನಾದರೂ ನಿಂತಿದ್ದರೆ, ಅವರೇ ಮುಂದೆ ನಿಂತು, ಚಾಲ್ತಿ ಮಾಡಿಸಿಕೊಟ್ಟಿದ್ದಾರೆ. ಇವರ ಕಾರ್ಯವೈಖರಿ ಇತರರಿಗೆ ಮಾದರಿಯಾಗಬೇಕಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next