Advertisement
ಕೊಡಿಗೇಹಳ್ಳಿ ಸಮೀಪದ ಗಣೇಶನಗರ ನಿವಾಸಿ ಸಿ.ವಿ.ಶೆಲ್ವಂತ್ ( 75) ಎಂಬುವವರು ಈ ಕುರಿತು ವಾಸನ್ ಐ ಕೇರ್ ವಿರುದ್ಧ ಸಲ್ಲಿಸಿದ್ದ ದೂರು ಮಾನ್ಯ ಮಾಡಿರುವ ಬೆಂಗಳೂರಿನ ಒಂದನೇ ಗ್ರಾಹಕ ನ್ಯಾಯಾಲಯ, ಇದೀಗ ದೂರುದಾರ ಶೆಲ್ವಂತ್ ಅವರಿಂದ ಅನಗತ್ಯವಾಗಿ ಕಟ್ಟಿಸಿಕೊಂಡಿದ್ದ 2500 ರೂ. ವಾಪಾಸ್ ನೀಡಬೇಕು ಹಾಗೂ ಅನಗತ್ಯ ಮಾನಸಿಕ ಕಿರಿಕಿರಿ ಉಂಟುಮಾಡಿದ ಹಾಗೂ ಕಾನೂನು ಹೋರಾಟಕ್ಕೆ ಇಳಿಯುವಂತೆ ಮಾಡಿದ ತಪ್ಪಿಗೆ ಐದು ಸಾವಿರ ದಂಡ ಹಾಗೂ ಐದು ಸಾವಿರ ರೂ. ಪರಿಹಾರ ಸೇರಿ ಒಟ್ಟು 12,500 ರೂ. ನೀಡುವಂತೆಯೂ ಆಸ್ಪತ್ರೆಗೆ ಆದೇಶಿಸಿದೆ.
Related Articles
Advertisement
ಇದಾದ ಬಳಿಕ ನಮ್ರತಾ ಅವರು, 2017ರ ಮೇ 17ರಂದು ಶಸ್ತ್ರಚಿಕಿತ್ಸೆಗೆ ರಾಜಾಜಿನಗರದ ವಾಸನ್ ಐ ಕೇರ್ಗೆ ಬರುವಂತೆ ತಿಳಿಸಿದ್ದರು. ಅದರಂತೆ, ಮೇ 17ರಂದು ಐ ಕೇರ್ ಸೆಂಟರ್ಗೆ ತೆರಳಿದ್ದ ಸೆಲ್ವಂತ್, ತಮ್ಮ ಕ್ರೆಡಿಟ್ ಕಾರ್ಡ್ನಿಂದ ಐದು ಸಾವಿರ ರೂ.ಗಳನ್ನು ಪಾವತಿಸಿದ್ದರು.
ಈ ಸಂಧರ್ಭದಲ್ಲಿ ಶಸ್ತ್ರಚಿಕಿತ್ಸೆ ವೇಳೆ ಅನೆಸ್ತೇಶಿಯಾ ನೀಡುವ ಸಲುವಾಗಿ 2500 ರೂ. ಶುಲ್ಕ ನೀಡಬೇಕು, ಒಂದು ವೇಳೆ ಅನೆಸ್ತೇಶಿಯಾ ನೀಡದಿದ್ದರೆ ಹಣ ವಾಪಾಸ್ ಕೊಡುವುದಾಗಿ ಸಿಬ್ಬಂದಿ ತಿಳಿಸಿದ್ದರು. ಇದನ್ನು ನಂಬಿದ್ದ ಸೆಲ್ವಂತ್ ಹೆಚ್ಚುವರಿಯಾಗಿ 2500 ರೂ. ಪಾವತಿಸಿದ್ದರು. ಆದರೆ, ಆ ಹಣಕ್ಕೆ ರಸೀದಿ ನೀಡಿರಲಿಲ್ಲ.
ಶಸ್ತ್ರಚಿಕಿತ್ಸೆ ವೇಳೆ ಸಾಮಾನ್ಯ ಅನೇಸ್ತಿಶೀಯಾ ನೀಡಿದ ತಜ್ಞರು, ಕೆಲವೇ ನಿಮಿಷಗಳಲ್ಲಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದ್ದರು. ಮಾರನೇ ದಿನ ಆರ್.ಟಿ.ನಗರದಲ್ಲಿರುವ ವಾಸನ್ ಐ ಕೇರ್ಗೆ ತೆರಳಿದ್ದ ಶೆಲ್ವಂತ್, ನಮ್ರತಾ ಅವರ ಬಳಿಕ ಶಸ್ತ್ರಚಿಕಿತ್ಸೆ ವೇಳೆ ಅನಸ್ತೇಶಿಯಾ ನೀಡಲಿಲ್ಲ.
ಹೀಗಾಗಿ ನಾನು ಪಾವತಿಸಿದ್ದ 2500 ರೂ. ವಾಪಾಸ್ ನೀಡಿ ಎಂದು ಮನವಿ ಮಾಡಿದ್ದರು. ಇದನ್ನು ತಿರಸ್ಕರಿಸಿದ್ದ ನಮ್ರತಾ, ಅನಸ್ತೇಶಿಯಾ ನೀಡಲಾಗಿದೆ ಎಂಬ 2500 ರೂ. ಬಿಲ್ ನೀಡಿದ್ದರು. ಇದರಿಂದ ಬೇಸತ್ತ ಶೆಲ್ವಂತ್ ಅವರು, ಹಣ ವಾಪಸ್ ನೀಡುವಂತೆ ಲೀಗಲ್ ನೋಟಿಸ್ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
* ಮಂಜುನಾಥ ಲಘುಮೇನಹಳ್ಳಿ