Advertisement

ಡಾ|ಗಿರಡ್ಡಿ ಮನೆಗೆ ಪೇಜಾವರ ಶ್ರೀ ಭೇಟಿ

04:26 PM Jul 16, 2018 | Team Udayavani |

ಧಾರವಾಡ: ಇತ್ತೀಚಿಗೆ ನಿಧನರಾದ ಹಿರಿಯ ಸಾಹಿತಿ, ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ್‌ ಅವರ ಮನೆಗೆ ರವಿವಾರ ಸಂಜೆ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಭೇಟಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

Advertisement

ಈ ವೇಳೆ ಗಿರಡ್ಡಿ ಅವರ ಪತ್ನಿ ಸರೋಜಾ ಗಿರಡ್ಡಿ ಅವರ ಕುಶಲೋಪರಿ ವಿಚಾರಿಸಿ ಸಾಂತ್ವನ ಹೇಳಿದ ಶ್ರೀಗಳು, ಡಾ| ಗಿರಡ್ಡಿ ಗೋವಿಂದರಾಜ್‌ ಅವರ ಅಗಲುವಿಕೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಬಹು ದೊಡ್ಡ ನಷ್ಟ. ಆಗಲಿಕೆಗೂ ಮುನ್ನ ಅವರು ಉಡುಪಿಯಲ್ಲಿ ಭೇಟಿಯಾಗಿದ್ದರು. ಒಳ್ಳೆಯ ಬರಹಗಾರರಾಗಿದ್ದರು ಎಂದರು. ಹ.ವೆಂ.ಕಾಖಂಡಿಕಿ, ಕೆ.ವಿಷ್ಣು ಆಚಾರ್ಯ, ಅಶೋಕ ನಿಂಗೋಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next