Advertisement

ಅಯೋಧ್ಯೆ ಯಾತ್ರೀ ನಿವಾಸಕ್ಕೆ ನಿವೇಶನ: ಪೇಜಾವರ ಶ್ರೀಗಳಿಗೆ ಮುಖ್ಯಮಂತ್ರಿ ಯೋಗಿ ಭರವಸೆ

11:27 PM Nov 03, 2020 | sudhir |

ಉಡುಪಿ: ಕರ್ನಾಟಕ ಸರಕಾರದಿಂದ ಅಯೋಧ್ಯೆಯಲ್ಲಿ ಯಾತ್ರೀ ನಿವಾಸ ನಿರ್ಮಿಸಲು ಸೂಕ್ತ ನಿವೇಶನವನ್ನು ಒದಗಿಸುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಪೇಜಾವರ ಶ್ರೀಗಳಿಗೆ ಭರವಸೆ ನೀಡಿದ್ದಾರೆ.

Advertisement

ಯಾತ್ರೀ ಭವನ ನಿರ್ಮಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಭೂಮಿ ಮಂಜೂರಾತಿಗೆ ಆದಿತ್ಯನಾಥ್‌ ಅವರಿಗೆ ಪತ್ರ ಬರೆದಿರುವುದನ್ನು ಪೇಜಾವರ ಶ್ರೀಗಳು ಗಮನಕ್ಕೆ ತಂದಾಗ ಶೀಘ್ರವೇ ಭೂಮಿಯನ್ನು ಮಂಜೂರು ಮಾಡುವುದಾಗಿ ತಿಳಿಸಿದರು.

ಪೇಜಾವರ ಶ್ರೀಗಳು ಮಂಗಳ ವಾರ ನೈಮಿಷಾರಣ್ಯಕ್ಕೆ ಭೇಟಿ ನೀಡಿ ಚಕ್ರತೀರ್ಥದಲ್ಲಿ ಸ್ನಾನ ಮಾಡಿದರು. ಗೋಮತಿ ನದಿ ಸ್ನಾನ ಮಾಡಿ ವ್ಯಾಸ ಗದ್ದುಗೆಯ ದರ್ಶನ ಪಡೆದರು. ಸಂಜೆ ಹರಿದ್ವಾರಕ್ಕೆ ಭೇಟಿ ನೀಡಿದರು. ಹರಿದ್ವಾರದಲ್ಲಿ ಬುಧವಾರ ಬೆಳಗ್ಗೆ ಗಂಗಾ ಸ್ನಾನ ಮಾಡಿ ಬದರಿಗೆ ತೆರಳುವರು. ಗುರುವಾರ ಬದರಿನಾರಾಯಣನ ದರ್ಶನ ಮಾಡಿ ಹರಿದ್ವಾರಕ್ಕೆ ಬಂದು ದಿಲ್ಲಿಗೆ ಪ್ರಯಾಣಿಸುವರು.

Advertisement

Udayavani is now on Telegram. Click here to join our channel and stay updated with the latest news.

Next