Advertisement

ಅಜ್ಜರಕಾಡಿನಲ್ಲಿ ಅಂತಿಮ ದರ್ಶನ ಅಂತ್ಯ; ಶ್ರೀಗಳ ಪಾರ್ಥಿವ ಶರೀರ ಬೆಂಗಳೂರಿಗೆ ಏರ್ ಲಿಫ್ಟ್

09:55 AM Dec 30, 2019 | Team Udayavani |

ಉಡುಪಿ: ಪೇಜಾವರ ಮಠದ ಹಿರಿಯ ಯತಿ ವಿಶ್ವೇಶ ತೀರ್ಥ ಸ್ವಾಮೀಜಿ (88ವರ್ಷ) ಪಾರ್ಥಿವ ಶರೀರದ ಅಂತಿಮ ದರ್ಶನ ಮುಕ್ತಾಯಗೊಂಡಿದ್ದು, ಇದೀಗ ಅಜ್ಜರಕಾಡು ಮೈದಾನದಿಂದ ಉಡುಪಿ ಹೆಲಿಪ್ಯಾಡ್ ನತ್ತ ಪಾರ್ಥಿವ ಶರೀರ ರವಾನಿಸಲಾಗಿದೆ.

Advertisement

ಉಡುಪಿ ಹೆಲಿಪ್ಯಾಡ್ ನಿಂದ ಸೇನಾ ಹೆಲಿಕಾಪ್ಟರ್ ಮೂಲಕ ಶ್ರೀಗಳ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯಲಾಗುತ್ತಿದ್ದು, ನಂತರ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಂಜೆ 5ಗಂಟೆವರೆಗೆ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಶ್ರೀಗಳ ಪಾರ್ಥಿವ ಶರೀರ ಕೊಂಡೊಯ್ದ ಸೇನಾ ಹೆಲಿಕಾಪ್ಟರ್ ಎಚ್ ಎಎಲ್ ಮೈದಾನದಲ್ಲಿ ಇಳಿಯಲಿದ್ದು, ಅಲ್ಲಿಂದ ಶ್ರೀಗಳ ಪಾರ್ಥವ ಶರೀರ ನ್ಯಾಷನಲ್ ಕಾಲೇಜು ಮೈದಾನಕ್ಕೆ ತಂದು ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next