Advertisement

ಬದರಿಯಲ್ಲಿ ನಡೆಯಲಾಗದೆ ಡೋಲಿ ಏರಿದ ಪೇಜಾವರ ಶ್ರೀ –ವೀಡಿಯೋ ವೈರಲ್‌

09:30 AM Oct 24, 2019 | Sriram |

ಉಡುಪಿ: ಉತ್ತರ ಭಾರತದ ಯಾತ್ರೆಯನ್ನು ಇತ್ತೀಚೆಗೆ ಮಾಡಿದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬದರೀನಾಥ ಕ್ಷೇತ್ರದಲ್ಲಿ ಆಮ್ಲಜನಕ ಕೊರತೆಯಿಂದ ನಡೆಯಲಾಗದೆ ಸುಮಾರು 300 ಮೀ. ದೂರ ಡೋಲಿಯನ್ನು ಏರಿ ಪ್ರಯಾಣಿಸಬೇಕಾಯಿತು. ಸ್ವಾಮೀಜಿಯವರು ಡೋಲಿಯಲ್ಲಿ ಕುಳಿತು ಸಾಗುತ್ತಿರುವ ಈ ವೀಡಿಯೋ ಇದೀಗ ವೈರಲ್‌ ಆಗುತ್ತಿದೆ.

Advertisement

ಡೆಹ್ರಾಡೂನ್‌ನಿಂದ ಬದರಿಗೆ ಹೆಲಿಕಾಪ್ಟರ್‌ನಲ್ಲಿ ಅ. 14ರಂದು ತೆರಳಿದ್ದ ಸ್ವಾಮೀಜಿಯವರು ಪೇಜಾವರ ಮಠವಾದ ಅನಂತ ಮಠದಿಂದ ಅಲಕಾನಂದ ನದಿ ಸೇತುವೆವರೆಗೆ ಸುಮಾರು 300 ಮೀ. ಕಾರಿನಲ್ಲಿ ತೆರಳಿದ್ದರು. ಅನಂತರ ಸುಮಾರು 300 ಮೀ. ದೂರ ನಡೆದು ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ದೇವರ ದರ್ಶನ ಮಾಡಿ ಸುಮಾರು 300 ಮೀ. ನಡೆದುಕೊಂಡು ಬಂದರು.

ಆಗ ಆಮ್ಲಜನಕದ ಕೊರತೆಯಾಗಿ ನಡೆಯಲಾಗಲಿಲ್ಲ. ಆ ಸಂದರ್ಭದಲ್ಲಿ ಅಲ್ಲಿ ಯಾವತ್ತೂ ಸ್ವಾಮೀಜಿಯವರಿಗೆ ಡೋಲಿ ಸೇವೆ ಮಾಡುವ ಸೇವಕರೊಬ್ಬರು ಕೂಡಲೇ ಡೋಲಿಯಲ್ಲಿ ಕೂಡಿಸಿಕೊಂಡು ಸುಮಾರು 300 ಮೀ. ದೂರವಿರುವ ಪೇಜಾವರ ಮಠಕ್ಕೆ ಶ್ರೀಗಳನ್ನು ಸುರಕ್ಷಿತವಾಗಿ ತಂದು ಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next