Advertisement

ದೇವರ,ಜನರ ಇಚ್ಛೆಯ ಸರ್ಕಾರ ಬರಲಿ; ಮತ ಹಾಕಿ  ಪೇಜಾವರ ಶ್ರೀ 

03:28 PM May 12, 2018 | |

ಉಡುಪಿ: ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಶ್ರೀಪಾದರು ಉಡುಪಿಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಮತ ಚಲಾಯಿಸಿದ್ದೇನೆ ಎಂದರು. 

ಯಾವ ಸರ್ಕಾರ ಬರಬೇಕು ಎಂದು  ಪ್ರಶ್ನಿಸಿದಾಗ ನಾನು ಯಾವುದನ್ನೂ ಹೇಳುವುದಿಲ್ಲ. ದೇವರ ಇಚ್ಛೆ ಮತ್ತು ಜನರ ಇಚ್ಛೆಯ ಸರ್ಕಾರ ಬರುತ್ತದೆ ಎಂದರು. 

ನಾನು ಯಾವುದಕ್ಕೂ ಉತ್ತರ ನೀಡುವುದಿಲ್ಲ,ಎಲ್ಲದಕ್ಕೂ ಒಂದೇ ಉತ್ತರ,ರಾಜ್ಯಕ್ಕೆ ಒಳ್ಳೆಯದಾಗಬೇಕು.ಅದೇ ನಮ್ಮ ಪ್ರಾರ್ಥನೆ ಎಂದರು. 

ಧಾರ್ಮಿಕ ಕಾರ್ಯಕ್ರಮಕ್ಕೆ ಕೇರಳಕ್ಕೆ ತೆರಳಿದ್ದ ಶ್ರೀಗಳು ಅಲ್ಲಿಂದ ನೇರವಾಗಿ ಬಂದು ಮತ ಚಲಾಯಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next