Advertisement

ಆದರ್ಶ ಅನುಸರಣೆಯಿಂದ ಆತ್ಮಕ್ಕೆ ಶಾಂತಿ

11:33 AM Aug 18, 2018 | Team Udayavani |

ಹುಮನಾಬಾದ: ವಾಜಪೇಯಿ ಅವರನ್ನು ಕೇವಲ ವರ್ಣಿಸಿದರೇ ಸಾಲದು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೇ ಅವರ ಆತ್ಮಕ್ಕೆ ಶಾಂತಿ ದೊರಕುತ್ತದೆ ಎಂದು ಮಾಜಿ ಶಾಸಕ ಸುಭಾಷ ಕಲ್ಲೂರ ಹೇಳಿದರು.

Advertisement

ಪಟ್ಟಣದ ಆರ್ಯ ಸಮಾಜ ಮಂದಿರದಲ್ಲಿ ತಾಲೂಕು ಬಿಜೆಪಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವರ ಸರಳ ಸಜ್ಜನಿಕೆ, ಕವಿ ಹೃದಯ, ನಿಸ್ವಾರ್ಥ ರಾಷ್ಟ್ರಪ್ರೇಮ ಪ್ರತಿಯೊಬ್ಬರಿಗೂ ಆದರ್ಶಪ್ರಾಯ ಎಂದರು. ಪಕ್ಷದ ಸುಭಾಷ ಅಷ್ಠಿಕರ, ಶಿವಾನಂದ ಮಂಠಾಳಕರ, ಸೋಮನಾಥ ಪಾಟೀಲ, ಪರಮೇಶ್ವರ ಆರ್ಯ, ಶಿವಶಂಕರ ತರನಳ್ಳಿ ನುಡಿನಮನ ಸಲ್ಲಿಸಿದರು.

ವಿಶ್ವನಾಥ ಪಾಟೀಲ ಮಾಡುಳ್‌, ಗಜೇಂದ್ರ ಕನಕಟಕರ್‌, ಅಶೋಕ ಸಿದ್ದೇಶ್ವರ, ಪ್ರಕಾಶ ತಾಳಮಡಗಿ, ಪ್ರಭಾಕರ
ನಾಗರಾಳೆ, ನಾರಾಯಣರಾವ್‌ ಚಿದ್ರಿ, ಬಾಬು ಜಾನವೀರ ಮೊದಲಾದವರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next