Advertisement

ಸಿದ್ದರಾಮಯ್ಯ ಕಾಲಿಗೆ ಬಿದ್ದ ಕಟಗೇರಿ ಪಿಡಿಒ ಆರತಿ ಕ್ಷತ್ರಿಯ

01:34 PM Feb 12, 2021 | Team Udayavani |

ಕೆರೂರ: ನರೇಗಾ ಯೋಜನೆಯಲ್ಲಿ ಅಕ್ರಮ ಆರೋಪ ಎದುರಿಸುತ್ತಿರುವ ಕಟಗೇರಿ ಪಿಡಿಒ ಆರತಿ ಕ್ಷತ್ರಿಯ ಮಾಜಿ ಸಿಎಂ, ಮಾಜಿ ಶಾಸಕ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿದರು.

Advertisement

ಜಿಪಂ ಹಿಂದಿನ ಸಿಇಒ ಗಂಗೂಬಾಯಿ ಮಾನಕರ ಮತ್ತು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅವರು ಪಿಡಿಒ  ಆರತಿ ವಿರುದ್ಧ ಶಿಸ್ತಿನ ಕ್ರಮ ಮುಂದಾಗಿದ್ದರು. ಗುರುವಾರದ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾಲಿಗೆ ಏಕಾಏಕಿ, ಎರಗುವ ಮೂಲಕ ಪಿಡಿಒ ಆರತಿ ಬೀಸುವ ದೊಣ್ಣೆಯಿಂದ ಪಾರಾಗಲು ಯತ್ನಿಸಿದರೆ ಎಂಬ ಚರ್ಚೆಗಳು ನೆರೆದ ಜನಪ್ರತಿನಿಧಿಗಳಿಂದ ಕೇಳಿಬಂದವು.

ಈಚೆಗೆ ಗುಳೇದಗುಡ್ಡ, ಬಾದಾಮಿ ತಾಪಂ ಸಭೆಯಲ್ಲಿ ಪಿಡಿಒ ಆರತಿ ವಿರುದ್ಧ ಹಲವು ಜನಪ್ರತಿನಿಧಿಗಳು ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next