Advertisement

ಕಬ್ಬು ಕಟಾವು ಆದ 15 ದಿನದಲ್ಲಿ ಹಣ ಪಾವತಿ

10:05 AM Nov 09, 2021 | Team Udayavani |

 ಶಹಾಬಾದ: ರೈತರ ಹೊಲದಲ್ಲಿ ಕಬ್ಬು ಕಟಾವು ಆದ ಹದಿನೈದು ದಿನದೊಳಗಾಗಿ ಹಣವನ್ನು ರೈತರ ಖಾತೆಗೆ ಸಂದಾಯ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಚೌಡಾಪುರ ಕೆಪಿಆರ್‌ ಸಕ್ಕರೆ ಕಾರ್ಖಾನೆಯ ಡಿಜಿಎಂ ರಾಜಶೇಖರ ಪಾಟೀಲ ಹೇಳಿದರು.

Advertisement

ತಾಲೂಕಿನ ಹೊನಗುಂಟಾ ಗ್ರಾಮದಲ್ಲಿ ಚೌಡಾಪುರ ಕೆಪಿಆರ್‌ ಸಕ್ಕರೆ ಕಾರ್ಖಾನೆ ವತಿಯಿಂದ ಕಬ್ಬು ಬೆಳೆದ ರೈತರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಒಂದು ಟನ್‌ ಕಬ್ಬಿಗೆ 2300ರಿಂದ 2400ವರೆಗೆ ನಿಗದಿ ಮಾಡುವ ಮೂಲಕ ರೈತರ ಖಾತೆಗೆ ಹಣ ಸಂದಾಯ ಮಾಡುತ್ತೇವೆ. ನಮ್ಮ ಕಾರ್ಖಾನೆ ವತಿಯಿಂದ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಕಟಾವು ಮಾಡಿದ ಹದಿನೈದು ದಿನದೊಳಗಾಗಿ ಹಣ ಸಂದಾಯ ಮಾಡುವುದಾದರೆ ಮಾತ್ರ ನಿಮಗೆ ಕಬ್ಬು ನೀಡುತ್ತೇವೆ. ಇಲ್ಲದಿದ್ದರೇ ಬೇರೆ ಕಾರ್ಖಾನೆಯವರಿಗೆ ನೀಡುತ್ತೇವೆ ಎಂದು ರೈತರು ಹೇಳಿದರು.

ಅದಕ್ಕೆ ಅಧಿಕಾರಿ ಹದಿನೈದು ದಿನದೊಳಗಾಗಿ ಹಣವನ್ನು ರೈತರ ಖಾತೆಗೆ ಸಂದಾಯ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಭರವಸೆ ನೀಡಿದರು. ಇದಕ್ಕೆ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ರೈತರು ಒಪ್ಪಿಗೆ ಸೂಚಿಸಿದರು.

Advertisement

ಕೆಪಿಆರ್‌ ಸಕ್ಕರೆ ಕಾರ್ಖಾನೆಯ ಸಂತೋಷ, ವೀರಪ್ಪ, ರೈತ ಮುಖಂಡರಾದ ಮಕದುಮ್‌ ಪಟೇಲ್‌, ಅಣಿರುದ್ರಗೌಡ, ಭೀಮುಗೌಡ ಖೇಣಿ, ಸಾಯಬಣ್ಣ ಕೊಲ್ಲೂರ್‌, ಹರ್ಷದ, ಶಿವಪ್ಪ ಕಂಟಿಕರ್‌, ಮಾರ್ಥಂಡ ಬುರ್ಲಿ, ಈರಣ್ಣ, ಕಾಲೀದ್‌ ಪಟೇಲ್‌, ಮಲ್ಲೇಶಪ್ಪ ಹೆಗ್ಗುಂಡಿ, ನಾಗೇಂದ್ರ ಟೆಂಗಳಿ, ಸಂಗಣ್ಣ ಬಾಗೋಡಿ, ಇಬ್ರಾಹಿಮ್‌, ಮೆಹಬೂಬಲಾಲ, ಶಿವಪ್ಪ ಹೆಗ್ಗುಂಡಿ, ಮಲ್ಲೇಶಿ, ಪ್ರಕಾಶಮ ರಾಮಣ್ಣ ಪೂಜಾರಿ, ಈರಣ್ಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next