Advertisement

‘ಪಾವೂರು ಉಳಿಯ’ ದ್ವೀಪ ಅಕ್ರಮ ಮರಳು‌ ದಂಧೆಗೆ ಬಳಕೆ; ಜಿಲ್ಲಾಡಳಿತ ಮೌನ ಖಂಡಿಸಿ ಪ್ರತಿಭಟನೆ

01:29 PM Sep 15, 2024 | Team Udayavani |

ಮಂಗಳೂರು: ನಗರ ಹೊರ ವಲಯದ ‘ಪಾವೂರು ಉಳಿಯ’ ದ್ವೀಪವನ್ನು ಅಕ್ರಮ ಮರಳು‌ ದಂಧೆಯ ಮೂಲಕ ದಂಧೆಕೋರರು ನಾಶ ಮಾಡುತ್ತಿದ್ದರೂ ಜಿಲ್ಲಾಡಳಿತ ಮೌನ ವಹಿಸಿರುವುದನ್ನು ಖಂಡಿಸಿ ದ್ವೀಪದ ನಿವಾಸಿಗಳು ಸೆ.15ರ ರವಿವಾರ ನೇತ್ರಾವತಿ ನದಿ ನೀರಿನಲ್ಲಿ ನಿಂತು ಪ್ರತಿಭಟಿಸಿದರು.

Advertisement

ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು,‌ ಅಕ್ರಮ ಮರಳುಗಾರಿಕೆಯಿಂದ ದ್ವೀಪವನ್ನು ರಕ್ಷಿಸುವಂತೆ ಆಗ್ರಹಿಸಿದರು.

ಧರ್ಮಗುರು ಫಾ| ವಲೇರಿಯನ್ ಡಿ’ಸೋಜಾ, ಕೆಥೋಲಿಕ್ ಸಭಾ ಮಂಗಳೂರು ಅಧ್ಯಕ್ಷ ಆಲ್ವಿನ್ ಡಿ’ಸೋಜಾ, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ, ಐಸಿ ವೈಎಂ ಮಾಜಿ ಅಧ್ಯಕ್ಷ ಮಿಥೇಶ್ ಲೋಬೊ, ಸ್ಥಳೀಯರಾದ ಗಿಲ್ಬರ್ಟ್ ಡಿ’ಸೋಜಾ ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ದ್ವೀಪದ ನಿವಾಸಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next