Advertisement

PavithraGowda ದರ್ಶನ್‌ 2ನೇ ಪತ್ನಿಯಲ್ಲ:ವಿಜಯಲಕ್ಷ್ಮೀ-ಕಮಿಷನರ್‌ ಗೆ ಬರೆದ ಪತ್ರದಲ್ಲೇನಿದೆ?

10:35 AM Jul 04, 2024 | Team Udayavani |

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ  ನಗರ
ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದ್ದು, ಪವಿತ್ರಾಗೌಡ ದರ್ಶನ್‌ನ 2ನೇ ಪತ್ನಿಯಲ್ಲ. ಆಕೆ ಸ್ನೇಹಿತೆ ಅಷ್ಟೇ. ನಾನೇ ದರ್ಶನ್‌ ಧರ್ಮ ಪತ್ನಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:Hathras Stampede:  ಹಾಥರಸ್‌ ಕಾಲ್ತುಳಿತ ನ್ಯಾಯಾಂಗ ತನಿಖೆಗೆ: ಯೋಗಿ

ಸಾಮಾಜಿಕ ಜಾಲತಾಣ ಹಾಗೂ ಕೆಲ ಪೊಲೀಸರು ನಟಿ ಪವಿತ್ರಾ ಗೌಡ ಅವರನ್ನು ದರ್ಶನ್‌ ಅವರು 2ನೇ ಪತ್ನಿ ಎಂದು ಹೇಳು ತ್ತಿದ್ದರು. ಈ ಸಂಬಂಧ ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ವಿಜಯಲಕ್ಷ್ಮೀ ಅವರು ಬರೆದಿರುವ ಪತ್ರದಲ್ಲಿ, “ದರ್ಶನ್‌ ಮತ್ತು ನಾನು 2003ರಲ್ಲಿ ಧರ್ಮಸ್ಥಳದಲ್ಲಿ ಮದುವೆ ಆಗಿದ್ದೇವೆ. ನಮಗೆ ಒಬ್ಬ ಮಗ ಇದ್ದಾನೆ ಎಂದು ತಿಳಿಸಿದ್ದಾರೆ.

ಪವಿತ್ರಾ ಗೌಡ ದರ್ಶನ್‌ ನ 2ನೇ ಪತ್ನಿ ಅಲ್ಲ. ಕೇವಲ ಸ್ನೇಹಿತೆ ಅಷ್ಟೇ. ಪವಿತ್ರಾ ಗೌಡಗೆ ಈಗಾಗಲೇ ಸಂಜಯ್‌ ಸಿಂಗ್‌ ಎಂಬವರ ಜತೆ ಮದುವೆಯಾಗಿದ್ದು, ಒಬ್ಬಳು ಮಗಳು ಕೂಡ ಇದ್ದಾಳೆ. ಕಾನೂನು ಪ್ರಕಾರ ನಾನು ಮಾತ್ರ ದರ್ಶನ್‌ನ ಏಕೈಕ ಪತ್ನಿ.

Advertisement

ಆದರೆ, ಪವಿತ್ರಾಗೌಡ ದರ್ಶನ್‌ನ 2ನೇ ಪತ್ನಿ ಎಂದು ಹೇಳುತ್ತಿರುವುದಕ್ಕೆ ನನಗೆ ನೋವಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ವಿಜಯಲಕ್ಷ್ಮೀ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next