Advertisement

ಪಾವಗಡ : ಟ್ರ್ಯಾಕ್ಟರ್ –ಬೈಕ್ ನಡುವೆ ಅಪಘಾತ , ಇಬ್ಬರು ಸ್ಥಳದಲ್ಲೇ ಸಾವು

11:28 PM Jun 07, 2022 | Team Udayavani |

ಪಾವಗಡ: ತಾಲೂಕಿನ ತುಮಕುಂಟೆ ಗೇಟ್ ಹಾಗೂ ಅರಸೀಕೆರ ಗ್ರಾಮದ ಬಳಿ ನಡೆದ ಟ್ರಾಕ್ಟರ್, ದ್ವಿ ಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರು ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

Advertisement

ಮಂಗಳವಾಡದ ಕಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನ ಅರಸೀಕೆರೆ ಕಡೆಗೆ ಹೋಗುತ್ತಿದ್ದ ಟ್ರಾಕ್ಟರ್ ನಡುವೆ ತುಮಕುಂಟೆ ಗೇಟ್ ಬಳಿ ಮುಖಾಮುಖಿ ಢಿಕ್ಕಿ ಹೊಡೆದಿದೆ ಪರಿಣಾಮ ಬೈಕ್ ಸವಾರ ಕ್ಯಾತಗಾನಹಳ್ಳಿ ಗ್ರಾಮದ ನರಸಿಂಹಮೂರ್ತಿ(45) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ವೇಳೆ ಅಪಘಾತ ನಡೆಸಿದ ಟ್ರ್ಯಾಕ್ಟರ್ ಚಾಲಕ ವಾಹನ ನಿಲ್ಲಿಸದೆ ಅರಸೀಕೆರೆ ಕಡೆಗೆ ಪರಾರಿಯಾಗಿದ್ದಾನೆ, ಇದನ್ನು ತುಮಕುಂಟೆ ಗ್ರಾಮದ ತಿಮ್ಮಯ್ಯ, ಮತ್ತು ಇತರರು ದ್ವಿ ಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಟ್ರ್ಯಾಕ್ಟರ್ ಚಾಲಕ ಟ್ರ್ಯಾಕ್ಟರ್ ನ್ನು ಅರಸೀಕೆರೆ ಬಳಿಯ ಪೆಟ್ರೋಲ್ ಬಂಕ್ ಸಮೀಪ ನಿಲ್ಲಿಸಿದ್ದು ಇದನ್ನು ಹಿಂಬಾಲಿಸಿಕೊಂಡು ಬಂದ ಬೈಕ್ ಸವಾರರು ಅತೀ ವೇಗದಲ್ಲಿದ್ದ ಪರಿಣಾಮ ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆಡಿದ್ದಾರೆ ಪರಿಣಾಮ ದ್ವಿಚಕ್ರ ವಾಹನ ಸವಾರ ತುಮಕುಂಟೆ ಗ್ರಾಮದ ತಿಮ್ಮಯ್ಯ(45) ಮೃತಪಟ್ಟಿದ್ದಾರೆ.

ಬೈಕ್ ನಲ್ಲಿದ್ದ ಇನ್ನೋರ್ವ ಸವಾರ ತಿಪ್ಪೇಸ್ವಾಮಿ ಅವರಿಗೆ ತೀವ್ರ ಗಾಯಗಳಾಗಿವೆ. ಅರಸೀಕೆರೆ ಪೊಲೀಸರು ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ : ಚಾರ್ಮಾಡಿಯಲ್ಲಿ ಬೈಕ್‌ ಸವಾರನ ಮೇಲೆ ಹರಿದ ಟ್ರಕ್, ಯುವಕ ಸ್ಥಳದಲ್ಲೇ ಸಾವು

Advertisement
Advertisement

Udayavani is now on Telegram. Click here to join our channel and stay updated with the latest news.

Next