Advertisement

ಪಾವಗಡ : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಚರಂಡಿಗೆ

06:32 PM Mar 31, 2022 | Team Udayavani |

ಪಾವಗಡ : ತಾಲ್ಲೂಕಿನಲ್ಲಿ 14 ದಿನಗಳ ಹಿಂದೆ ನಡೆದ ಬಸ್ ದುರುಂತ ಮರೆಯುವ ಮುನ್ನ ಗುರುವಾರ ಮತ್ತೊಂದು ಖಾಸಗಿ ಬಸ್ ಅಪಘಾತ ‌ನಡೆದಿದೆ.

Advertisement

ಚಾಲಕನ ನಿಯಂತ್ರಣ ತಪ್ಪಿ ಬಸ್ ಚರಂಡಿಗೆ ಇಳಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಅಗಿಲ್ಲ.ತಾಲೂಕಿನ ಚಿನ್ನಮ್ಮನಹಳ್ಳಿ ಗ್ರಾಮದಿಂದ ಪಾವಗಡ ಪಟ್ಟಣ ಕ್ಕೆ ಬರುವಾಗ ಕೋಣನಕುರಿಕೆ ಗ್ರಾಮದ ಹತ್ತಿರ ಆಕಸ್ಮಿಕವಾಗಿ ಅಟೋ ಅಡ್ಡ ಬಂದಿದ್ದು .ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಮುಂದಿನ ಟೈರ್ ಚರಂಡಿಗೆ‌ ಇಳಿದೆ.

ಯಾವುದೇ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ತಾಲ್ಲೂಕಿನ ಪಳವಳ್ಳಿ ಕಟ್ಟೆ ಬಳಿ ಮಾ. 19 ರಂದು ನಡೆದ ಖಾಸಗಿ ಬಸ್ ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next