Advertisement

Pavagada: ವ್ಯಕ್ತಿಯ ಕೊಲೆ; ಆರೋಪಿ ಬಂಧನ

12:17 PM Oct 17, 2023 | Team Udayavani |

ಪಾವಗಡ: ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿದ ಘಟನೆ ಪಟ್ಟಣದ ಶನಿ ದೇಗುಲ ಬಳಿಯ ಹೋಟೆಲ್ ಮುಂಭಾಗ ಆ.16ರ ಸೋಮವಾರ ನಡೆದಿದೆ.

Advertisement

ಪಟ್ಟಣದ ಕುರುಬರ ಬೀದಿ ನಿವಾಸಿ ಶಂಕರಪ್ಪ(55) ಮೃತರಾಗಿದ್ದು, ಪಟ್ಟಣದ ಗಂಗಮ್ಮ ದೇಗುಲದ ಬಳಿಯ ಅನಿಲ(35) ಕೊಲೆ ಆರೋಪಿ ಎಂದು ತಿಳಿದು ಬಂದಿದೆ.

ಖಾಸಗಿ ಹೋಟೆಲ್ ಮುಂಭಾಗ ಊಟ ಮಾಡುತ್ತಿದ್ದ ಆರೋಪಿಗೆ ಮೃತ  ಶಂಕರಪ್ಪ ಇಲ್ಲಿ ತಿನ್ನಬೇಡ ಪಕ್ಕಕ್ಕೆ ಹೋಗು ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಅಲ್ಲಿಯೇ ಇದ್ದ ಕಟ್ಟಿಗೆ ತೆಗೆದುಕೊಂಡು ಶಂಕರಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.  ಶಂಕರಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶಂಕರಪ್ಪ ಸೊಸೈಟಿಯಲ್ಲಿ ಅಕ್ಕಿ ತೂಕ ಮಾಡುವ ಕೆಲಸ ಮಾಡುತ್ತಿದ್ದರು. ಆರೋಪಿಯನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next