Advertisement

ಹುತಾತ್ಮ ಸೈನಿಕರ ಕುಟುಂಬಕ್ಕೆ 50,000 ರೂ.ನೆರವು : ಅನುರಾಧಾ ಪೌದ್ವಾಲ್

12:24 PM Feb 10, 2017 | udayavani editorial |

ಮುಂಬಯಿ : ಖ್ಯಾತ ಹಿನ್ನೆಲೆ ಗಾಯಕಿ ಅನುರಾಧಾ ಪೌದ್ವಾಲ್‌ ಅವರು, ಈಚೆಗೆ ಹುತಾತ್ಮರಾದ ಐವರು ಸೈನಿಕರ ಕುಟುಂಬಗಳಿಗೆ ಹಣಕಾಸು ನೆರವು ನೀಡಲು ನಿರ್ಧರಿಸಿದ್ದಾರೆ.

Advertisement

ಹುತಾತ್ಮರಾದ ಐವರು ಸೈನಿಕ ಕುಟುಂಬಗಳಿಗೆ ತನ್ನ ಸೂರ್ಯೋದಯ ಟ್ರಸ್ಟ್‌ ಮೂಲಕ ತಾನು 50,000 ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಪೌದ್ವಾಲ್‌ ಹೇಳಿದ್ದಾರೆ. 

ಇದೇ ಪೆ.18ರಂದು ಪೌದ್ವಾಲ್‌ ಅವರನ್ನು ಮಹಾರಾಷ್ಟ್ರ ಸರಕಾರದ ವತಿಯಿಂದ ರಾಜ್ಯಪಾಲ ಸಿ ವಿದ್ಯಾಸಾಗರ ರಾವ್‌ ಅವರು, ಆಕೆ ಸಂಗೀತ ಹಾಗೂ ಸಮಾಜ ಸೇವಾ ಕ್ಷೇತ್ರಕ್ಕೆ ನೀಡಿರುವ ಅದ್ವಿತೀಯ ಕಾಣಿಕೆಗಾಗಿ, ಸಮ್ಮಾನಿಸಲಿದ್ದಾರೆ.

ಅದೇ ಕಾರ್ಯಕ್ರಮದ ಸಂದರ್ಭದಲ್ಲಿ ತಾನು ಹುತಾತ್ಮ ಸೈನಿಕರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ಪೌದ್ವಾಲ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next