Advertisement

ಮಾಲ್ದೀವ್ಸ್‌ಗೆ ಗಸ್ತು ಹಡಗು ಗಿಫ್ಟ್ : ಇಂದಿನಿಂದ 3 ದಿನ ರಕ್ಷಣಾ ಸಚಿವರ ಪ್ರವಾಸ

12:00 AM May 01, 2023 | Team Udayavani |

ಹೊಸದಿಲ್ಲಿ: ಸ್ನೇಹದ ಉಡುಗೊರೆಯಾಗಿ ಭಾರತವು ಮಾಲ್ದೀವ್ಸ್‌ಗೆ ಒಂದು ವೇಗವಾಗಿ ಚಲಿಸುವ ಗಸ್ತು ಹಡಗು ಹಾಗೂ ಇಳಿಸುವ ದೋಣಿಯನ್ನು ನೀಡಲಿದೆ. ಮೇ 1ರಿಂದ 3 ರವರೆಗೆ ಮಾಲ್ದೀವ್ಸ್‌ ಪ್ರವಾಸ ಕೈಗೊಳ್ಳಲಿರುವ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಉಡುಗೊರೆಗಳನ್ನು ಆ ದೇಶಕ್ಕೆ ಹಸ್ತಾಂತರಿಸಲಿದ್ದಾರೆ.

Advertisement

ಹಿಂದೂ ಮಹಾಸಾಗರ ವ್ಯಾಪ್ತಿ ಪ್ರದೇಶದಲ್ಲಿ ಚೀನ ಪ್ರಾಬಲ್ಯ ವಿಸ್ತರಿಸುತ್ತಿರುವಂತೆಯೇ ಭಾರತ ಸರಕಾರ ನೆರೆಯ ದೇಶಗಳೊಂದಿಗೆ ಬಾಂಧವ್ಯ ವಿಸ್ತರಿಸುವ ನಿಟ್ಟಿನಲ್ಲಿ ರಕ್ಷಣ ಸಚಿವರ ಈ ಭೇಟಿ ಮಹತ್ವ ಪಡೆದಿದೆ.

ಮೂರು ದಿನಗಳ ಪ್ರವಾಸದ ವೇಳೆ ಸಿಂಗ್‌, ಮಾಲ್ದೀವ್ಸ್‌ ಅಧ್ಯಕ್ಷ ಇಬ್ರಾಹಿಂ ಮೊಹಮದ್‌ ಸೊಲ್ಲಿ, ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್‌, ರಕ್ಷಣ ಸಚಿವ ಮರಿಯಾ ದೀದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಮಾಲ್ದೀವ್ಸ್‌ನಲ್ಲಿ ಇರುವ ಭಾರತೀಯ ಸಮುದಾ ಯದವರನ್ನು ಭೇಟಿ ಮಾಡಿ ಅವರು ವಿಚಾರ ವಿನಿಮಯ ನಡೆಸಲಿದ್ದಾರೆ. ಇದರ ಜತೆಗೆ ಕೇಂದ್ರ ಸರಕಾರದ ನೆರವಿನಿಂದ ಜಾರಿಯಾಗುತ್ತಿರುವ ಹಲವು ಯೋಜನೆಗಳು ಯಾವ ಹಂತದಲ್ಲಿ ಇವೆ ಎಂಬುದರ ಪ್ರಗತಿ ಪರಿಶೀಲನೆಯನ್ನೂ ಅವರು ನಡೆಸಲಿದ್ದಾರೆ. ಕೇಂದ್ರ ಸರಕಾರ ನೆರೆಯ ದೇಶಗಳತ್ತ ಹೊಂದಿರುವ ಭದ್ರತೆ ಮತ್ತು ಎಲ್ಲ ಪ್ರದೇಶಗಳ ಬೆಳವಣಿಗೆ (ಎಸ್‌ಎಜಿಎಆರ್‌-ಸಾಗರ್‌)ಯೋಜನೆಯ ಅನ್ವಯ ಭೇಟಿ ನೀಡಲಾಗುತ್ತಿದೆ.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜಧಾನಿ ಮಾಲೆಯಿಂದ 6.74 ಕಿಮೀ ದೂರದಲ್ಲಿರುವ ನಾಲ್ಕು ದ್ವೀಪಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಸಹಿ ಹಾಕಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next