Advertisement

ಸಂಜಯ್ ರಾವತ್ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

08:31 PM Sep 27, 2022 | Team Udayavani |

ಮುಂಬಯಿ: ಗೋರೆಗಾಂವ್‌ ಪತ್ರಾ ಚಾವ್ಲ್ ಹಗರಣದಲ್ಲಿ ಸಿಲುಕಿದ ಸಂಜಯ್ ರಾವತ್ ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ಅ.10ರವರೆಗೆ ವಿಸ್ತರಿಸಿದೆ.

Advertisement

ಇಂದು ನ್ಯಾಯಾಲಯದಲ್ಲಿ ಸಂಜಯ್ ರಾವತ್ ಜಾಮೀನು ಅರ್ಜಿ ವಿಚಾರಣೆ ನಡೆಯಿತು.

ಮುಂಬಯಿ ಗೋರೆಗಾಂವ್‌ ಪ್ರದೇಶದಲ್ಲಿನ ಪತ್ರಾ ಚಾವ್ಲ್ ಪುನರಾಭಿವೃದ್ಧಿಯಲ್ಲಿ ಹಣಕಾಸು ಅವ್ಯವಹಾರ ನಡೆಸಿದ ಆರೋಪದಲ್ಲಿ ರಾವತ್‌ ಅವರನ್ನು ಜಾರಿ ನಿರ್ದೇಶನಾಲಯ ಆಗಸ್ಟ್ 1 ರಂದು ಬಂಧಿಸಿತ್ತು.

ನಂತರ ರಾವತ್ ಅವರನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.

ಜಾಮೀನು ಪಡೆಯಲು ರಾವತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಗಾಗಿ ರಾವತ್ ಅವರನ್ನು ಇಂದು ಪಿಎಂಎಲ್ ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Advertisement

ಈ ಬಾರಿ ಇಡಿ ವಾದಗಳನ್ನು ಮಂಡಿಸಲು ದಿನಾಂಕವನ್ನು ಕೇಳಿದೆ. ಅದರಂತೆ ಇದೀಗ ನ್ಯಾಯಾಲಯ ವಿಚಾರಣೆಯನ್ನು ಅ.10ಕ್ಕೆ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next