Advertisement

ಕುಮಾರಸ್ವಾಮಿ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಪಟ್ಟನಾಯಕ್‌ ಇಲ್ಲ

04:42 PM May 23, 2018 | Team Udayavani |

ಭುವನೇಶ್ವರ : ಕರ್ನಾಟಕದ ಮುಖ್ಯಮಂತ್ರಿಯಾಗಿ ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಅವರ  ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ಟನಾಯಕ್‌ ಅವರು ಬಂದಿಲ್ಲ.

Advertisement

ತಾನು ಈ ಬಗೆಯ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡದ್ದಿಲ್ಲ ಎಂದು ಪಟ್ಟನಾಯಕ್‌ ಕಾರಣ ನೀಡಿದ್ದಾರೆ. 

ಬಿಜೆಡಿ ಪಕ್ಷ,  ಕಾಂಗ್ರೆಸ್‌ಮತ್ತು ಬಿಜೆಪಿಯಿಂದ ಸಮಾನ ದೂರವನ್ನು ಕಾಯ್ದುಕೊಂಡಿದೆ ಎಂದು ಬಿಜೆಡಿ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌ ಸಾಹೂ ಹೇಳಿದ್ದಾರೆ. ಆದುದರಿಂದ ತೀರ ಪ್ರಾದೇಶಿಕ ಪಕ್ಷವಾಗಿರುವ ಬಿಜೆಡಿಗೆ, ಕಾಂಗ್ರೆಸ್‌ ಅಥವಾ ಬಿಜೆಪಿಯೊಂದಿಗೆ ಏನೂ ಮಾಡಲಿಕ್ಕಿಲ್ಲ ಎಂದು ಸಾಹೂ ಹೇಳಿದರು.

ಕುಮಾರಸ್ವಾಮಿ ಅವರ ಸಿಎಂ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಅಖೀಲೇಶ್‌, ಮಾಯಾವತಿ,ಅರವಿಂದ ಕೇಜ್ರಿವಾಲ್‌  ಮುಂತಾಗಿ ಹಲವಾರು ನಾಯಕರು ಪಾಲ್ಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next