Advertisement

ನಾವೂರು ಗಂಗಾಧರ ಶೆಟ್ಟರ ಮನೆಯವರಿಗೆ ಪಟ್ಲ ಫೌಂಡೇಶನ್‌ ನೆರವು

11:36 AM Feb 15, 2018 | |

ಬೆಳ್ತಂಗಡಿ: ಅಕಾಲದಲ್ಲಿ ಮರಣಕ್ಕೀಡಾದ ಬಪ್ಪನಾಡು ಮೇಳದ ಯಕ್ಷಗಾನ ಕಲಾವಿದ ನಾವೂರು ದಿ| ಗಂಗಾಧರ ಶೆಟ್ಟಿ ಅವರ ಮನೆಯವರಿಗೆ ಯಕ್ಷಧ್ರುವ ಪಟ್ಲ ಬೆಂಗಳೂರು ಘಟಕದ ವತಿಯಿಂದ 50 ಸಾವಿರ ರೂ. ಸಾಂತ್ವನ ಧನ
ವನ್ನು ಫೌಂಡೇಶನ್‌ನ ಅಧ್ಯಕ್ಷ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರು ಹಸ್ತಾಂತರಿಸಿದರು.

Advertisement

ಬೆಳ್ತಂಗಡಿ ಘಟಕ ಅಧ್ಯಕ್ಷ ಭುಜಬಲಿ ಧರ್ಮಸ್ಥಳ, ಸಂಚಾಲಕ ರಘುರಾಮ ಶೆಟ್ಟಿ ಉಜಿರೆ, ಕಾರ್ಯದರ್ಶಿ ಲಕ್ಷ್ಮೀ ಮಚ್ಚಿನ, ಸಹ ಕಾರ್ಯದರ್ಶಿ ಸಂಪತ್‌ ಸುವರ್ಣ, ಪ್ರಸಾದ್‌ ಶೆಟ್ಟಿ ಎಣಿಂಜೆ, ಕುಲಾಲರ ಯುವ ಸಂಘದ ರಾಜ್ಯ ಅಧ್ಯಕ್ಷ ಹರೀಶ್‌ ಕಾರಿಂಜ ಉಪಸ್ಥಿತರಿದ್ದರು. ಗಂಗಾಧರ ಶೆಟ್ಟರ ಪತ್ನಿ ಯಶೋದಾ ಹಾಗೂ ಪುತ್ರಿ ಶ್ರೀರಕ್ಷಾ ಕೃತಜ್ಞತೆ ಸಲ್ಲಿಸಿದರು.

ಶೆಟ್ಟರ ಕುರಿತು ಸೋಮವಾರ ಉದಯವಾಣಿ ಸುದಿನದಲ್ಲಿ ವರದಿ ಪ್ರಕಟಿಸಿತ್ತು. ಇದಕ್ಕೆ ಅನೇಕರು ಸ್ಪಂದಿಸಿದ್ದು, ಅವರ
ಬ್ಯಾಂಕ್‌ ಖಾತೆಗೆ ಹಣ ಜಮಾವಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next