Advertisement

ಪಾದಚಾರಿಗಳಿಗೆ ದಾರಿ: ತಳ್ಳುಗಾಡಿಗಳಿಂದ ಮುಕ್ತಿ

12:30 AM Feb 02, 2019 | |

ಉಡುಪಿ:  ಸಿಟಿ  ಮತ್ತು ಸರ್ವೀಸ್‌ ಬಸ್‌ ನಿಲ್ದಾಣಗಳ ನಡುವಿನ ಜನ, ವಾಹನ ನಿಬಿಡ‌ ಸ್ಥಳವಾಗಿರುವ ಐರೋಡಿಕಾರ್‌ ಜಂಕ್ಷನ್‌ನಲ್ಲಿ ರಸ್ತೆ ಮಧ್ಯೆಯೇ ಇದ್ದ  ತಳ್ಳುಗಾಡಿಗಳನ್ನು ತೆರವುಗೊಳಿಸಲಾಗಿದೆ. 

Advertisement

ತಳ್ಳುಗಾಡಿಗಳಿಂದಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು. ಜತೆಗೆ ಎರಡು ಬ್ಯಾರಿಕೇಡ್‌ಗಳ ನಡುವೆ ಪಾದಚಾರಿಗಳು ಸಂಚರಿಸುತ್ತಿದ್ದ ಸ್ಥಳವನ್ನು ರಿಬ್ಬನ್‌ಗಳನ್ನು ಕಟ್ಟುವ ಮೂಲಕ ಬಂದ್‌ ಮಾಡಿರುವ ಬಗ್ಗೆಯೂ ಗಮನ ಸೆಳೆದಿತ್ತು. ವರದಿ ಪ್ರಕಟವಾದ ಅನಂತರ ಪೊಲೀಸರು  ಎರಡು ತಳ್ಳುಗಾಡಿಗಳನ್ನು ತೆರವುಗೊಳಿಸಿದ್ದಾರೆ. ಅಡ್ಡಲಾಗಿ ಕಟ್ಟಿದ್ದ ರಿಬ್ಬನ್‌ಗಳನ್ನು ಕೂಡ ತೆರವು ಮಾಡಿದ್ದಾರೆ. 

“ಐರೋಡಿಕಾರ್‌ ಜಂಕ್ಷನ್‌ನಿಂದ ಸಿಟಿಬಸ್‌ (ಉಡುಪಿ-ಮಣಿಪಾಲ ಮುಖ್ಯರಸ್ತೆ) ಕಡೆ ಏಕಮುಖ ಸಂಚಾರವಿದೆ.  ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಪಾದಚಾರಿಗಳಿಗಾಗಿ ಮೀಸಲಿಟ್ಟ ಜಾಗದಲ್ಲಿ ದ್ವಿಚಕ್ರಗಳನ್ನು ನುಗ್ಗಿಸಿದರೆ ಕೇಸು ದಾಖಲಿಸಲಾಗುವುದು ಎಂದು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next