Advertisement

ಏರ್‌ಇಂಡಿಯಾ ಸಿಬಂದಿ ಮೇಲೆ ಕೈ ಮಾಡಿದ ಪ್ರಯಾಣಿಕರು

11:26 AM Jan 05, 2020 | Team Udayavani |

ಹೊಸದಿಲ್ಲಿ: ದಿಲ್ಲಿಯಿಂದ ಮುಂಬಯಿಗೆ ತೆರಳುತ್ತಿದ್ದ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರು ವಿಮಾನ ಸಿಬಂದಿ ಮೇಲೆ ಕೈ ಮಾಡಿ, ಕಾಕ್‌ಪಿಟ್‌ ಬಾಗಿಲನ್ನು ಮುರಿಯುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

Advertisement

ವಿಮಾನದಲ್ಲಿ ತಾಂತ್ರಿಕ ಅಡಚಣೆ ಉಂಟಾದ ಕಾರಣ ಹಾರಾಟ ತಡವಾಯಿತು. ಆಗ ಪ್ರಯಾಣಿಕರು ಹದ್ದುಮೀರಿ ವರ್ತಿಸಿದ್ದಾರೆ. ಹಲವರು ಕಾಕ್‌ಪಿಟ್‌ನ ಬಾಗಿಲು ಬಡಿದು, ಪೈಲಟ್‌ಗೆ ಹೊರಬರಲು ತಾಕೀತು ಮಾಡಿದ್ದಾರೆ. ಓರ್ವ ಮಹಿಳಾ ಪ್ರಯಾಣಿಕರು ಮಹಿಳಾ ಸಿಬಂದಿಯ ಕೈ ತಿರುಚಿದ ಘಟನೆಯೂ ನಡೆದಿದೆ ಎನ್ನಲಾಗಿದೆ. ಘಟನೆ ಕುರಿತು ಸಂಪೂರ್ಣ ವರದಿ ನೀಡಲು ಸಿಬಂದಿಗೆ ಏರ್‌ ಇಂಡಿಯಾ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next