Advertisement

Party ಬಿಟ್ಟು ಹೋದವರನ್ನು ವಾಪಸ್‌ ಸೇರಿಸಿಕೊಳ್ಳಲ್ಲ: ಉದ್ಧವ್‌, ಪವಾರ್‌

11:49 PM Jun 15, 2024 | Team Udayavani |

ಮುಂಬಯಿ: ಪಕ್ಷವನ್ನು ಒಡೆದು ಹೋದವರನ್ನು ಮತ್ತೆ ವಾಪಸ್‌ ಸೇರಿಕೊಳ್ಳುವುದಿಲ್ಲ ಎಂದು ಶಿವಸೇನೆ (ಯುಬಿಟಿ) ನಾಯಕ ಉದ್ಧವ್‌ ಠಾಕ್ರೆ ಹಾಗೂ ಎನ್‌ಸಿಪಿ(ಎಸ್‌ಪಿ) ನಾಯಕ ಶರದ್‌ ಪವಾರ್‌ ಹೇಳಿದ್ದಾರೆ. ಈ ಮೂಲಕ ಮಹಾರಾಷ್ಟ್ರದ ಹಾಲಿ ಸಿಎಂ ಏಕನಾಥ ಶಿಂಧೆ, ಡಿಸಿಎಂ ಅಜಿತ್‌ ಪವಾರ್‌ರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡುವುದಿಲ್ಲ ಎಂದು ಇಬ್ಬರು ನಾಯಕರು ಸೂಚಿಸಿದಂತಾಗಿದೆ.

Advertisement

ಲೋಕಸಭೆ ಚುನಾವಣೆ ಫ‌ಲಿತಾಂಶ ಬಗ್ಗೆ ಮೂರೂ ಪಕ್ಷಗಳ ಸಂಸದೀಯ ಮಂಡಳಿ ಸಭೆಯಲ್ಲಿ ಪರಾಮರ್ಶೆ ನಡೆಸಿದ ಬಳಿಕ ಮುಖಂಡರು ಮುಂಬಯಿ ಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

“ಎಂಥದೇ ಪರಿಸ್ಥಿತಿಯಲ್ಲೂ ಬಿಜೆಪಿ ಗೆಲುವಿನ ಅಭಿಯಾನ ಮುಂದುರಿಸಲಿದೆ’ ಎಂಬ ಮಾತು ಎಷ್ಟು ಪೊಳ್ಳಾಗಿದೆ ಎಂಬುದನ್ನು ಲೋಕಸಭೆ ಚುನಾ ವಣೆಯಲ್ಲಿ ಜನರು ತೋರಿಸಿ ಕೊಟ್ಟಿದ್ದಾರೆ’ ಎಂದು ಉದ್ಧವ್‌ ವಿವರಿಸಿದ್ದಾರೆ. ಇದೇ ವೇಳೆ, ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ ಉದ್ಧವ್‌ ನೇತೃತ್ವದ ಶಿವಸೇನೆ ಮತ್ತೆ ಮರಳಲಿದೆ ಎಂಬ ಸುದ್ದಿಯನ್ನೂ ಅವರು ಅಲ್ಲಗಳೆದಿದ್ದಾರೆ.

ಈ ಜಯ ಪ್ರಾರಂಭ ಮಾತ್ರ: ಉದ್ಧವ್‌
ಲೋಕಸಭೆ ಚುನಾವಣೆಯಲ್ಲಿ ಮಹಾ ವಿಕಾಸ್‌ ಆಘಾಡಿ (ಎಂವಿಎ) ಜಯ ಮಹಾರಾಷ್ಟ್ರದಲ್ಲಿ ಕೇವಲ ಆರಂಭ ಮಾತ್ರ. ಶೀಘ್ರವೇ ನಡೆ ಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಒಕ್ಕೂಟವೇ ಜಯ ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಮೋದಿಗೆ ಅಭಿನಂದನೆ: ಶರದ್‌ ಪವಾರ್‌ ವ್ಯಂಗ್ಯ
ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್‌ ಆಘಾಡಿ (ಕಾಂಗ್ರೆಸ್‌-ಶಿವಸೇನೆ-ಎನ್‌ಸಿಪಿ) ಪರವಾಗಿ ರಾಜಕೀಯ ಪರಿಸ್ಥಿತಿಯನ್ನು ಸೃಷ್ಟಿಸಿ ಕೊಟ್ಟಿದ್ದಕ್ಕೆ ನಾವು ಪ್ರಧಾನಿ ಮೋದಿಗೆ ಅಭಿನಂದನೆ ಹೇಳುತ್ತೇವೆ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ವ್ಯಂಗ್ಯವಾಡಿದರು.

Advertisement

ಶೀಘ್ರ ಚುನಾವಣೆಗೆ ಸಿದ್ಧತೆ: ಇದೇ ವೇಳೆ ಮಾತನಾಡಿದ ಕಾಂಗ್ರೆಸ್‌ ನಾಯಕ ಪೃಥ್ವೀರಾಜ್‌ ಚವಾಣ್‌ ಅವರು, ನಮ್ಮ ಮೈತ್ರಿಕೂಟದಲ್ಲಿ ದೊಡ್ಡಣ್ಣ ಮತ್ತು ಚಿಕ್ಕಣ್ಣ ಎಂದು ಯಾರೂ ಇಲ್ಲ. ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಪ್ರತೀ ವಿಧಾನಸಭೆ ಕ್ಷೇತ್ರವನ್ನು ಗೆಲ್ಲುವುದಕ್ಕೆ ಹೋರಾಟ ನಡೆಸುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಸಿದ್ಧತೆಯನ್ನು ಶೀಘ್ರವೇ ಆರಂಭಿಸುತ್ತೇವೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next