Advertisement

ಎ. 20ಕ್ಕೆ ಆರ್‌ಬಿಐ ಗವರ್ನರ್‌ ವಿಚಾರಣೆ

11:02 AM Mar 24, 2017 | Team Udayavani |

ಹೊಸದಿಲ್ಲಿ: ನೋಟುಗಳ ಅಪನಗದೀಕರಣದ ಹಿನ್ನೆಲೆಯಲ್ಲಿ ಹಣಕಾಸು ವಿಚಾರಕ್ಕಾಗಿನ ಸಂಸತ್‌ನ ಸ್ಥಾಯಿ ಸಮಿತಿ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ವಿಚಾರಣೆ ನಡೆಸಲಿದೆ. ಅದಕ್ಕಾಗಿ ಏ.20ರಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸಮನ್ಸ್‌ ನೀಡಲಾಗಿದೆ. ಅಪನಗದೀಕರಣ ಬಳಿಕ ಹಳೆಯ ಮುಖಬೆಲೆಯ ಎಷ್ಟು ನೋಟುಗಳು ಆರ್‌ಬಿಐಗೆ ಜಮೆಯಾಗಿವೆ ಎಂಬ ವಿಚಾರದ ಬಗ್ಗೆ ಸಮಿತಿ ಮಾಹಿತಿ ಕೇಳಲಿದೆ. ಜತೆಗೆ ಪರ್ಯಾಯವಾಗಿ ಎಷ್ಟು ಕೋಟಿ ಮೊತ್ತದ ಹೊಸ ನೋಟುಗಳು ಮಾರುಕಟ್ಟೆಯಲ್ಲಿವೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡುವಂತೆ ಅವರಿಗೆ ಸೂಚಿಸಲಿದೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್‌ದಾಸ್‌, ಹಣಕಾಸು ಸೇವೆಗಳ ಕಾರ್ಯದರ್ಶಿ ಅಂಜಲಿ ಚಿಬ್‌ ದುಗ್ಗಲ್‌ ಕೂಡ ಸಮಿತಿ ಮುಂದೆ ಹಾಜರಾಗಲಿದ್ದಾರೆ. ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯಿಲಿ ಸಮಿತಿಯ ಮುಖ್ಯಸ್ಥರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next