Advertisement

ಜೇವರ್ಗಿಯಲ್ಲಿ ಪರಿವರ್ತನಾ ಯಾತ್ರೆ

10:55 AM Dec 11, 2017 | Team Udayavani |

ಜೇವರ್ಗಿ: ನವಕರ್ನಾಟಕ ನಿರ್ಮಾಣದ ಹಿನ್ನೆಲೆಯಲ್ಲಿ ಬಿಜೆಪಿ ಆಯೋಜಿಸಿರುವ ಪರಿವರ್ತನಾ ರ್ಯಾಲಿ ಸೋಮವಾರ
ಜೇವರ್ಗಿ ಪಟ್ಟಣಕ್ಕೆ ಪ್ರವೇಶಿಸಲಿದ್ದು, ಯಾತ್ರೆ ಸ್ವಾಗತಿಸಲು ತಾಲೂಕು ಬಿಜೆಪಿ ಘಟಕ ಸಜ್ಜಾಗಿ ನಿಂತಿದೆ.

Advertisement

ಬಿಜೆಪಿ ಕಲಬುರಗಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾಗಿರುವ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ತವರೂ ಕ್ಷೇತ್ರಕ್ಕೆ ಆಗಮಿಸುತ್ತಿರುವ ರ್ಯಾಲಿ ಯಶಸ್ವಿಗೆ ಬಿಜೆಪಿ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಇದುವರೆಗೂ ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟೇ ಪರಿಣಾಮಕಾರಿ ಯಾತ್ರೆ ನಡೆಸಿದ್ದರೂ ಇಲ್ಲಿ ಮಾತ್ರ ಶೇ.100ರಷುx ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸವನ್ನು ಇಲ್ಲಿಯ ಮುಖಂಡರು ವ್ಯಕ್ತಪಡಿಸುತ್ತಾರೆ.

ಪಟ್ಟಣದ ರಿಲಾಯನ್ಸ್‌ ಪೆಟ್ರೋಲ್‌ ಬಂಕ್‌ನಿಂದ ದೇವರಮನಿ ಲೇಔಟ್‌ ವರೆಗೆ ಕಟೌಟ್‌, ಬಂಟಿಂಗ್ಸ್‌, ಬ್ಯಾನರ್‌, ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ. 

ಬೆಳಗ್ಗೆ 11:00ಕ್ಕೆ ಜೇವರ್ಗಿ ಪಟ್ಟಣಕ್ಕೆ ಆಗಮಿಸುವ ರ್ಯಾಲಿ ಮುಂದೆ ಯಾದಗಿರಿ ಜಿಲ್ಲೆ ಪ್ರವೇಶಿಸಲಿದೆ. ಪಟ್ಟಣದ
ರಿಲಾಯನ್ಸ್‌ ಪೆಟ್ರೋಲ್‌ ಬಂಕ್‌ನಿಂದ ದೇವರಮನಿ ಲೇಔಟ್‌ ವರೆಗೆ ನಡೆಯುವ ಅದ್ಧೂರಿ ಮೆರವಣಿಗೆಯಲ್ಲಿ ಸಾವಿರಾರು ಬೈಕ್‌ಗಳು ಪಕ್ಷದ ಧ್ವಜದೊಂದಿಗೆ ಭಾಗವಹಿಸಲಿವೆ. ಸುಮಾರು 1.5 ಕಿಮೀ ವರೆಗೆ ಯಾತ್ರೆ ನಡೆಯಲಿದ್ದು,
ಮೆರವಣಿಗೆ ಅಖಂಡೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ, ಶಾಂತನಗರ ಕ್ರಾಸ್‌, ಬಸವೇಶ್ವರ ವೃತ್ತ, ಮಿನಿವಿಧಾನಸೌಧ
ಮೂಲಕ ಕಾರ್ಯಕ್ರಮದ ಸ್ಥಳದವರೆಗೆ ಸಂಚರಿಸಲಿದೆ. 

ಪರಿವರ್ತನಾ ರ್ಯಾಲಿಯಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದು, ಕಾರ್ಯಕರ್ತರಿಗಾಗಿ 300 ಮೀಟರ್‌ ಅಗಲ 500 ಮೀಟರ್‌ ಉದ್ದದ ವೇದಿಕೆ ನಿರ್ಮಾಣ ಮಾಡಲಾಗಿದೆ.

Advertisement

ಸಮಾವೇಶಕ್ಕೆ ಬರುವ ಕಾರ್ಯಕರ್ತರಿಗೆ ಶುದ್ಧ ಕುಡಿಯುವ ನೀರು, ಪರಿವರ್ತನಾ ರ್ಯಾಲಿಯಲ್ಲಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ, ಪುರಂದೇಶ್ವರಿ, ಸಾದ್ವಿ ನಿರಂಜನ ಜ್ಯೋತಿ, ಶಾಸಕರಾದ ಸಿ.ಟಿ. ರವಿ, ರವಿಕುಮಾರ, ಅರವಿಂದ ಲಿಂಬಾವಳಿ, ರಮೇಶ ಭೂಸನೂರ, ರಘುನಾಥ ಮಲ್ಕಾಪುರೆ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮಾಜಿ ಸಚಿವರು, ಶಾಸಕರು, ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next