Advertisement

ಸಿಎಂ ಸೋಲಿಸಲು ಪರಮೇಶ್ವರ್‌ ಸಜ್ಜು: ಬಿ.ಎಸ್‌.ಯಡಿಯೂರಪ್ಪ

06:25 AM May 11, 2018 | |

ಬಾಗಲಕೋಟೆ: ಕಳೆದ ಬಾರಿ ತುಮಕೂರಿನಲ್ಲಿ ಡಾ.ಪರಮೇಶ್ವರ್‌ ಅವರನ್ನು ಸಿದ್ದರಾಮಯ್ಯ ಸೋಲಿಸಿದ್ದರು. ಅದೇ ರೀತಿ, ಈ ಬಾರಿ ಸಿದ್ದರಾಮಯ್ಯ ಅವರನ್ನು ಪರಮೇಶ್ವರ್‌ ಹಾಗೂ ಬೆಂಬಲಿಗರು ಸೋಲಿಸಿ, ಸೇಡು ತೀರಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವೀರಶೈವ ಲಿಂಗಾಯತರನ್ನು ಒಡೆಯುವ ಮೂಲಕ ಶಿವಯೋಗ ಮಂದಿರ ಸಂಸ್ಥಾಪಕ ಹಾನಗಲ್‌ ಕುಮಾರೇಶ್ವರ ಶ್ರೀಗಳಿಗೆ ಅವಮಾನ ಮಾಡಿದ ಸಿಎಂ ಸಿದ್ದರಾಮಯ್ಯ ಅವರನ್ನು ಬಾದಾಮಿ ಜನ ಕ್ಷಮಿಸೋದಿಲ್ಲ. ಅವರನ್ನು ಸೋಲಿಸಿ ವಾಲ್ಮೀಕಿ ಸಮಾಜದ ನಾಯಕ ಶ್ರೀರಾಮುಲು ಅವರನ್ನು ಗೆಲ್ಲಿಸಲಿದ್ದಾರೆ. ಎರಡೂ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನವರೇ ಸೋಲಿಸಲಿದ್ದಾರೆ. ಅವರನ್ನು ಸೋಲಿಸಲೆಂದೇ ಕಾಂಗ್ರೆಸ್‌ ನಾಯಕರು ಹಿಂಡು ಹಿಂಡಾಗಿ ಬೀಡು ಬಿಟ್ಟಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next