Advertisement

ಪರಮೇಶ್ವರ್‌ಗೆ ನನ್ನ ಮೇಲೆ ಮುನಿಸೂ ಇಲ್ಲ, ಏನೂ ಇಲ್ಲ !

12:10 PM Sep 02, 2017 | |

ಬೆಂಗಳೂರು : ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಗೈರಾಗಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. 

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪರಮೇಶ್ವರ್‌ ಅವರಿಗೆ ನನ್ನ ಮೇಲೆ ಮುನಿಸೂ ಇಲ್ಲ ಏನೂ ಇಲ್ಲ.ಅವರು ದೆಹಲಿಗೆ ಹೋಗಿದ್ದರು.ಹಾಗಾಗಿ ಗೈರಾಗಿದ್ದರು ಎಂದರು.

ಈ ವೇಳೆ ಪತ್ರಕರ್ತರು ‘ಅವರು ಬೆಂಗಳೂರಿನಲ್ಲೇ ಇದ್ರಲ್ಲಾ ಸರ್‌’ ಎಂದು ಪ್ರಶ್ನಿಸಿದಾಗ , ‘ಹಾಗಾದ್ರೆ ಅವರನ್ನೇ ಕೇಳಿ’ ಎಂದು ಸಿಎಂ ಪ್ರತಿಕ್ರಿಯೆ ನೀಡಿದರು. 

ಇಬ್ಬರೂ ಚೆನ್ನಾಗಿದ್ದಾರೆ

ಸಿಎಂ ಭೇಟಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಬಕಾರಿ ಸಚಿವ ಆರ್‌.ಬಿ. ತಿಮ್ಮಾಪುರ ಅವರು ‘ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ್‌ ಅವರು ಚೆನ್ನಾಗಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ್ಲ ಇಲ್ಲ. ಎಲ್ಲಾ ಗೊಂದಲಗಳನ್ನು  ಮಾಧ್ಯಮಗಳೇ ಸೃಷ್ಟಿಸುತ್ತಿವೆ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next