Advertisement

ಪರ್ಕಳ ಬಸ್‌ ನಿಲ್ದಾಣದ ಗೋಳು

03:45 AM Jul 09, 2017 | Team Udayavani |

ಉಡುಪಿ: ಪರ್ಕಳ ಬಸ್‌ ನಿಲ್ದಾಣ ಸೂಕ್ತ ವ್ಯವಸ್ಥೆಯಿಲ್ಲದೆ ನರಳುತ್ತಿದೆ. ಇಲ್ಲಿ ಮಳೆ ಬಂದಾಗಲಂತೂ ಆಚೀಚೆ ಓಡಾಡುವುದೇ ದುಸ್ತರ. 

Advertisement

ಮೊದಲೇ ಅಗಲ ಕಿರಿದಾದ ರಸ್ತೆಯ ಆಚೀಚಿಗಿನ ಚರಂಡಿಯಲ್ಲಿ ಹೂಳು ತುಂಬಿ ನೀರು ಹರಿದು ಹೋಗಲು ಸ್ಥಳವಿಲ್ಲ. ಅಂದರೆ ಚರಂಡಿಯೇ ಮಾಯವಾಗಿದೆ. ಮಳೆಗಾಲ ಮುನ್ನ ರಸ್ತೆಯನ್ನು ದುರಸ್ತಿ ಮಾಡಿದ್ದರೂ ಹಿಂದೆ ಇದ್ದದ್ದಕಿಂತ ದೊಡ್ಡ ದೊಡ್ಡ ಹೊಂಡಗಳು ಕಾಣುತ್ತಿವೆ. 

ಮಳೆ ಬಂದಾಗ ಹೊಂಡಗಳಲ್ಲಿ ನೀರು ತುಂಬಿ ವಾಹನ ಸಂಚರಿಸುವುದು ಕಷ್ಟ. ಮಳೆ ಇಲ್ಲದಾಗಲೂ ಆಚೀಚೆ ನಡೆಯುವವರು ಕೊಡೆ ಹಿಡಿದುಕೊಂಡೇ ಹೋಗಬೇಕು. ಏಕೆಂದರೆ ಸಂಚರಿಸುವ ವಾಹನಗಳು ಚಿಮ್ಮಿಸುವ ಕೊಳಚೆ ನೀರಿನಿಂದ ರಕ್ಷಣೆ ಪಡೆಯಲು, ಕೊಡೆಯನ್ನು ಅಡ್ಡ ಹಿಡಿದು. ಪರ್ಕಳದಲ್ಲಿ ಸಂಘಸಂಸ್ಥೆಗಳು ಜಾಸ್ತಿ. ಹೀಗಾಗಿ ಕೆಸರಿಡೊಂಜಿ ದಿನ, ನೇಜಿ ದಿನ ಇತ್ಯಾದಿಗಳನ್ನು ನಡೆಸಲು ಇದುವೇ ಸೂಕ್ತ ಸ್ಥಳ ಎಂಬ ವ್ಯಂಗ್ಯ ಕೇಳಿಬರುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next