Advertisement

ಪಾಣೆಮಂಗಳೂರು: ನದಿಗೆ ಹಾರಿದ ಮೂವರು; ಮಹಿಳೆ ಸಾವು

10:34 AM Sep 30, 2019 | mahesh |

ಬಂಟ್ವಾಳ: ಮಂಗಳೂರು – ಬೆಂಗಳೂರು ಹೆದ್ದಾರಿಯ ಪಾಣೆಮಂಗಳೂರು ಸೇತುವೆಯಲ್ಲಿ ಶನಿವಾರ ರಾತ್ರಿ ಮೂವರು ನೇತ್ರಾವತಿ ನದಿಗೆ ಹಾರಿದ್ದಾರೆ ಎನ್ನಲಾಗಿದ್ದು, ಈ ಪೈಕಿ ಮಹಿಳೆ ಸಾವನ್ನಪ್ಪಿದ್ದಾರೆ.

Advertisement

ಮೈಸೂರು ಪಶ್ಚಿಮದ ನೋಂದಣಿ ಸಂಖ್ಯೆ ಹೊಂದಿರುವ ಇಕೋ ಕಾರಿನಲ್ಲಿ ಆಗಮಿಸಿದ್ದ ಇವರು ಮೊದಲು ತಮ್ಮ ನಾಯಿಯನ್ನು ನದಿಗೆ ದೂಡಿ, ಬಳಿಕ ನೀರಿಗೆ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ.

ಹೆದ್ದಾರಿಯ ಹೊಸ ಸೇತುವೆಯಲ್ಲಿ ಇವರು ನದಿಗೆ ಹಾರಿದ್ದು, ಮಹಿಳೆಯನ್ನು ಹಳೆಸೇತುವೆ ಬಳಿ ಗೂಡಿನ ಬಳಿಯ ಯುವಕರು ಮೇಲೆತ್ತಿದ್ದಾರೆ. ಅವರ ನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇವರ ಗುರುತು ಪತ್ತೆಯಾಗಿಲ್ಲ.

ಮತ್ತಿಬ್ಬರಲ್ಲಿ ಒಬ್ಬ ಗಂಡಸು ಹಾಗೂ ಮಗು ಎಂದು ಕೆಲವರು ಹೇಳುತ್ತಿದ್ದು, ಮತ್ತೆ ಕೆಲವರು ಮಹಿಳೆ ಮತ್ತು ಗಂಡಸು ಮಾತ್ರ ಇದ್ದರು ಎನ್ನುತ್ತಿದ್ದಾರೆ.

ಅವರು ಬಂದಿದ್ದ ಕಾರು ಸೇತುವೆಯ ಬಳಿ ಪತ್ತೆಯಾಗಿದೆ. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next