Advertisement

Panemangalore Bridge ಬಿ.ಸಿ. ರೋಡ್‌ನ‌ಲ್ಲಿ ತಾಸು ಕಾಲ ಟ್ರಾಫಿಕ್‌ ಜಾಮ್‌

12:24 AM Oct 03, 2023 | Team Udayavani |

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಪಾಣೆಮಂಗಳೂರು ನೇತ್ರಾವತಿ ಸೇತುವೆಯಲ್ಲಿ ಸೋಮವಾರ ಲಾರಿಯೊಂದು ಕೆಟ್ಟು ನಿಂತ ಪರಿಣಾಮವಾಗಿ ಸುಮಾರು 1 ಗಂಟೆ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

Advertisement

ಲಾರಿಯ ಟಯರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದು ಸೇತುವೆಯ ಮಧ್ಯೆಯೇ ನಿಲ್ಲುವಂತಾಯಿತು. ವಾಹನಗಳು ಒಂದು ಬದಿಯಲ್ಲಿ ಮಾತ್ರ ಸಂಚರಿಸಿದ ಪರಿಣಾಮ ಸೇತುವೆಯ ಎರಡೂ ಬದಿಗಳಲ್ಲೂ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.

ಬಳಿಕ ಕ್ರೇನ್‌ ತರಿಸಿ ಲಾರಿಯನ್ನು ಎಳೆದುಕೊಂಡು ಹೋಗಿ ಬದಿಗೆ ಸರಿಸ ಲಾಯಿತು. ಬಂಟ್ವಾಳ ಸಂಚಾರ ಠಾಣಾ ಪಿಎಸ್‌ಐ ಸುತೇಶ್‌ ಹಾಗೂ ಸಿಬಂದಿ ಸ್ಥಳಕ್ಕಾಗಮಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕೈಗೊಂಡರು.

ಕಳೆದ 2 ವಾರಗಳಲ್ಲಿ ವಾಹನಗಳ ಅಪಘಾತ ಮತ್ತು ಕೆಟ್ಟು ನಿಂತು ಟ್ರಾಫಿಕ್‌ ಜಾಮ್‌ ಉಂಟಾಗುತ್ತಿರುವುದು ಇದು 3ನೇ ಘಟನೆಯಾಗಿದೆ.

ಕಲ್ಲಡ್ಕ: ನಿತ್ಯವೂಟ್ರಾಫಿಕ್‌ ಜಾಮ್‌
ಹೆದ್ದಾರಿ ಕಾಮಗಾರಿಯ ಪರಿಣಾಮ ಕಲ್ಲಡ್ಕದಲ್ಲಿ ಸರ್ವೀಸ್‌ ರಸ್ತೆಯ ಗೊಂದಲದಿಂದ ನಿತ್ಯವೂ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಫ್ಲೆ$çಓವರ್‌ ನಿರ್ಮಾಣದಿಂದ ಸದ್ಯ ಸರ್ವೀಸ್‌ ರಸ್ತೆಯಲ್ಲೇ ಸಂಚರಿಸಬೇಕಿದೆ. ಆದರೆ ಕಾಮಗಾರಿ ನಿರ್ವಹಿಸುವ ಸಂಸ್ಥೆಯು ಸರ್ವೀಸ್‌ ರಸ್ತೆಯನ್ನು ಸಮರ್ಪಕವಾಗಿ ನಿರ್ವಹಿಸದ ಪರಿಣಾಮ ಹೊಂಡ ಗುಂಡಿಗಳಿಂದ ತುಂಬಿ ವಾಹನಗಳ ಸರಾಗ ಸಾಗಾಟಕ್ಕೆ ಅಡ್ಡಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next