Advertisement

ವಿಚಾರಣಾಧಿಕಾರಿ ನೇಮಕಕ್ಕೆ ಸುಪ್ರೀಂಗೆ ಮನವಿ

12:30 AM Jan 18, 2019 | |

ಹೊಸದಿಲ್ಲಿ: “ಕಾಫಿ ವಿತ್‌ ಕರಣ್‌’ ಕಾರ್ಯಕ್ರಮದಲ್ಲಿ ಮಹಿಳೆಯರ ವಿರುದ್ಧ ಅಸಭ್ಯ ಹೇಳಿಕೆಗಳನ್ನು ನೀಡಿ ಭಾರತ ಕ್ರಿಕೆಟ್‌ ತಂಡದಿಂದ ಅಮಾನತುಗೊಂಡಿರುವ ಹಾರ್ದಿಕ್‌ ಪಾಂಡ್ಯ, ಕೆ.ಎಲ್‌. ರಾಹುಲ್‌ ಅವರ ಭವಿಷ್ಯ ಅತಂತ್ರಗೊಂಡಿದೆ. ಇಬ್ಬರೂ ಆಟಗಾರರು ಬೇಷರತ್‌ ಕ್ಷಮೆಯಾಚನೆ ಮಾಡಿದರೂ ಬಿಸಿಸಿಐ ಆಡಳಿತಾಧಿಕಾರಿಗಳು ವಿಶೇಷ ತನಿಖಾಧಿಕಾರಿಯನ್ನು ನೇಮಕ ಮಾಡಲು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ!

Advertisement

ನ್ಯಾಯಾಲಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ. ಇದರ ಪರಿಣಾಮ ಜ. 23ರಿಂದ ಆರಂಭವಾಗುವ ನ್ಯೂಜಿಲ್ಯಾಂಡ್‌ ಸರಣಿಯನ್ನೂ ಈ ಇಬ್ಬರು ಆಟಗಾರರು ಕಳೆದುಕೊಳ್ಳಲಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ತಾವು ಮಾಡಿದ್ದು ತಪ್ಪಾಗಿದೆ ಎಂದು ಇಬ್ಬರೂ ಸ್ಪಷ್ಟವಾಗಿ ಹೇಳಿದ್ದರೂ, ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿಗಳು ಪ್ರಕರಣವನ್ನು ಎಳೆದಾಡುತ್ತಿರುವುದಕ್ಕೆ ಹಲವು ಮೂಲೆಗಳಿಂದ ಆಕ್ಷೇಪ ವ್ಯಕ್ತವಾಗಿದೆ. 

ಪ್ರಕರಣವನ್ನು ಅತಿಯಾಗಿ ಎಳೆದಾಡಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಮುಂದಿನ ವಾರ ಬಿಸಿಸಿಐ ವಿಚಾರಣಾಧಿಕಾರಿಯನ್ನು ನೇಮಕ ಮಾಡಲಿದೆ. ಈ ವಿಚಾರಣೆ ಮುಗಿದು ಫ‌ಲಿತಾಂಶ ಹೊರಬರಲು ಇನ್ನೆಷ್ಟು ಸಮಯ ತೆಗೆದುಕೊಳ್ಳಲಿದೆ ಎನ್ನುವುದು ಖಚಿತವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next