Advertisement
ಬೇಲ್ತೂರು ರಮೇಶ ಬೇಲ್ತೂರು ರಮೇಶ 5ನೇ ತರಗತಿಯಲ್ಲಿ ಓದುತ್ತಿರುವಾಗಲೇ ಅಂದಿನ ಪ್ರಸಿದ್ಧ ಬಣ್ಣದ ವೇಷಧಾರಿ ಬೇಲ್ತೂರು ರಾಮ ಬಳೆಗಾರರೊಂದಿಗೆ ಹೂವಿನ ಕೋಲು ತಿರುಗಾಟ ಮಾಡಿ ಬಣ್ಣದ ಲೋಕಕ್ಕೆ ಬಂದರು. ಪ್ರಸಿದ್ಧ ವೇಷಧಾರಿ ಹೇರಂಜಾಲು ವೆಂಕಟರಮಣ ಗಾಣಿಗರಿಂದ ಹೆಜ್ಜೆ ಕಲಿತು ಮಾರಣಕಟ್ಟೆ ಮೇಳಕ್ಕೆ ಸೇರ್ಪಡೆಗೊಂಡು ಯಕ್ಷಗಾನ ಬದುಕು ಆರಂಭಿಸಿದರು. ಗುರು ವೀರಭದ್ರ ನಾಯ್ಕರಿಂದ ಮತ್ತಷ್ಟು ಪರಿಣತಿ ಪಡೆದು ಸೌಕೂರು ,ಹಾಲಾಡಿ, ಮಡಾಮಕ್ಕಿ ,ಮಂದಾರ್ತಿ,ಸಾಲಿಗ್ರಾಮ ,ಕಮಲಶಿಲೆ ಮುಂತಾದ ಮೇಳಗಳಲ್ಲಿ ಸುದೀರ್ಘ ತಿರುಗಾಟ ಮಾಡಿದರು. ಬಭುವಾಹನ ,ಅಭಿಮನ್ಯು,ಲವಕುಶ ,ಚಿತ್ರಸೇನ ,ಶ್ರೀ ಕೃಷ್ಣ ಮುಂತಾದ ವೇಷಗಳಲ್ಲಿ ಮಿಂಚಿದ ಹಿರಿಮೆ ಬೇಲೂ¤ರು ಅವರದು. 1979 ರಲ್ಲಿ ಅಮೆರಿಕಾದಿಂದ ಬಂದು ಯಕ್ಷಗಾನ ಸಂಶೋಧನೆ ಮಾಡಿ ಡಾಕ್ಟರೇಟ್ ಪದವಿ ಪಡೆದ ಡಾ| ಮಾರ್ತಾ ಆಸ್ಟಿನ್ ಅವರ ತಂಡದಲ್ಲಿದ್ದು ಹಲವು ದೇಶಗಳನ್ನು ಸುತ್ತಿದರು.
ದಯಾನಂದ ನಾಗೂರು 6ನೆ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ಬಳಿಕ ಗುರು ಹೆರಂಜಾಲು ವೆಂಕಟರಮಣ ಗಾಣಿಗರಿಂದ ಯಕ್ಷಗಾನದ ಹೆಜ್ಜೆ ಕಲಿತರು. ಮಾರಣಕಟ್ಟೆ , ಅಮೃತೇಶ್ವರಿ, ಮಂದಾರ್ತಿ, ಸಾಲಿಗ್ರಾಮ, ಇಡಗುಂಜಿ ಮೇಳಗಳಲ್ಲಿ ಬಾಲಗೋಪಾಲ, ಒಡ್ಡೋಲಗದ ವೇಷದ ನಂತರ ಸ್ತ್ರೀ ವೇಷದಲ್ಲಿ ಪ್ರಸಿದ್ಧಿಯನ್ನು ಪಡೆದು ಪ್ರಧಾನ ಸ್ತ್ರೀ ವೇಷಧಾರಿಯಾಗಿ ರಂಗಸ್ಥಳದಲ್ಲಿ ಮೆರೆದರು. ರುಕಾ¾ಂಗದ ಚರಿತ್ರೆಯ ಮೋಹಿನಿ, ಸೀತೆ, ಸೈರೇಂದ್ರಿ, ಪ್ರಭಾವತಿ, ಪ್ರಮೀಳೆ ಮುಂತಾದವುಗಳಲ್ಲಿ ತಮ್ಮದೇ ಛಾಪನ್ನು ಒತ್ತಿದರು.ಡಾ| ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲಿ ವಿದೇಶಗಳಲ್ಲಿ ಪ್ರದರ್ಶನ ನೀಡಿದ ಹಿರಿಮೆಯಿದೆ. ದಯಾನಂದ ಬಳ್ಕೂರು